FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, July 27, 2016

BIRTHDAY

ಹುಟ್ಟುಹಬ್ಬ ಆಚರಣೆ
 ನಮ್ಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ನಿಶ್ಮಿತಾ ಜುಲಾಯಿ ತಿಂಗಳ 21 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದಳು . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು . 
ನಮ್ಮ ಶಾಲೆಯ ಎರಡನೇ  ತರಗತಿಯ ವಿದ್ಯಾರ್ಥಿ ಪವನ್ ರಾಮ್ ಜುಲಾಯಿ ತಿಂಗಳ 26 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದನು  . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು . ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ  ಹೆತ್ತವರಿಗೆ ಅಭಿನಂದನೆಗಳು .

Thursday, July 21, 2016

CHANDRADIN

ಚಾಂದ್ರ ದಿನ 

ಚಾಂದ್ರದಿನ ಕ್ಕೆ ಸಂಬಂಧಿಸಿ ಏಳನೇ ತರಗತಿಯ ಮಕ್ಕಳು ಭಿತ್ತಿಪತ್ರಿಕೆಯನ್ನು ತಯಾರಿಸಿದರು .

ಮಕ್ಕಳಿಗೆ ಚಾಂದ್ರಯಾನ್ ೧ ,  ಬಾಹ್ಯಾಕಾಶ ಯಾತ್ರೆ ಹಾಗೂ  ಉಪಗ್ರಹ ಉಡ್ಡಯನದ ವೀಡಿಯೊ ಪ್ರದರ್ಶನವನ್ನು ಏರ್ಪಡಿಸಲಾಯಿತು. 

Wednesday, July 20, 2016

TULU Camp

ತುಳು  ನಿನಾದ - ದ್ವಿದಿನ ಶಿಬಿರ 

ಎಸ್. ಎಸ್.  ಎ ಕಾಸರಗೋಡು , ಬಿ. ಆರ್. ಸಿ.  ಮಂಜೇಶ್ವರ  ಇದರ ಸಹಭಾಗಿತ್ವದಲ್ಲಿ ಬಿ. ಪಿ. ಪಿ. ಎ. ಎಲ್ . ಪಿ. ಶಾಲೆ ಪೆರ್ಮುದೆ ಇಲ್ಲಿ  ಜರಗಿದ ಎರಡು ದಿನಗಳ  ತುಳು ಶಿಬಿರ "ತುಳು ನಿನಾದ " ದಲ್ಲಿ ನಮ್ಮ ಶಾಲೆಯ  ಮಕ್ಕಳು  ಭಾಗವಹಿಸಿ ಪ್ರಮಾಣಪತ್ರವನ್ನು  ಪಡೆದಿರುತ್ತಾರೆ 

RAMAYANA QUIZ

ರಾಮಾಯಣ ರಸಪ್ರಶ್ನೆ 
ರಾಮಾಯಣ ಮಾಸಾಚರಣೆಯ ಪ್ರಯುಕ್ತ ಶಾಲಾ ಸಂಸ್ಕ್ರತ ಸಂಘದ ನೇತೃತ್ವದಲ್ಲಿ  ರಾಮಾಯಣದ ಕುರಿತು  ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಶಾಲಾ ಸಂಸ್ಕ್ರತ ಅಧ್ಯಾಪಕ ಕೃಷ್ಣ ಪ್ರಸಾದ್ ಅವರು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿದರು .  ಅದರಲ್ಲಿ ಏಳನೇ ತರಗತಿಯ ಸಿಂಜಿತಾ ಪ್ರಥಮ ಸ್ಥಾನವನ್ನು, ಶಾರದಾ ಸುರಭಿ ದ್ವಿತೀಯ ಸ್ಥಾನವನ್ನು ಪಡೆದರು

VEGETABLE SEED DISTRIBUTION

ತರಕಾರಿ ಬೀಜ ವಿತರಣೆ 
ಕೇರಳ ಸರಕಾರದ ಕೃಷಿ ಇಲಾಖೆಯು "ಎಲ್ಲಾ ಮಕ್ಕಳಿಗೆ ತರಕಾರಿ ಬೀಜ ಎಲ್ಲಾ ಶಾಲೆಗಳಲ್ಲಿ ತರಕಾರಿ ತೋಟ " ಎಂಬ ಧೋರಣೆಯೊಂದಿಗೆ ಪ್ರತಿವರ್ಷವೂ ತರಕಾರಿ ಬೀಜಗಳನ್ನು ವಿತರಿಸುತ್ತಾ ಬಂದಿದೆ. ಅದರಂತೆ ಈ ವರ್ಷ ಪುತ್ತಿಗೆ ಕೃಷಿ ಭವನದಿಂದ  ಒದಗಿಸಿದ ತರಕಾರಿ ಬೀಜವನ್ನು ನಮ್ಮ ಶಾಲೆಯ ಪಿ.ಟಿ. ಎ   ಸದಸ್ಯರೂ  ಉತ್ತಮ ಕೃಷಿಕರೂ ಆಗಿರುವ ಕರುವಜೆ ಕೃಷ್ಣ ಭಟ್ ಅವರು ಶಾಲಾ  ಎಸೆಂಬಲಿ ಯಲ್ಲಿ ಮಕ್ಕಳಿಗೆ ವಿತರಿಸಿದರು. 

Tuesday, July 19, 2016

HEALTH CHECK UP

ಆರೋಗ್ಯ ತಪಾಸಣೆ 
ಪುತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ನರ್ಸ್ ಗಳು  ಶಾಲೆಗೆ ಆಗಮಿಸಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಐದನೇ ತರಗತಿಯ ಮಕ್ಕಳಿಗೆ ಟಿ.ಟಿ. ಚುಚ್ಚುಮದ್ದು ನೀಡಿದರು. 







 


ATIKALANJA

ಆಟಿಕಳಂಜ 
ಕುಣಿಯುತ ಬರುವನು ಆಟಿಕಳಂಜ 
ಕೆಂಬಣ್ಣದ ಕುಪ್ಪಸವನು ತೊಟ್ಟು