FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, March 9, 2017

GANITHOTHSAVA & SHASTROTHSAVA

ಗಣಿತೋತ್ಸವ ಮತ್ತು ವಿಜ್ಞಾನೋತ್ಸವ :






ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್ ನ ಕಾರ್ಯಕ್ರಮ ಗಣಿತೋತ್ಸವ ಹಾಗೂ  ವಿಜ್ಞಾನೋತ್ಸವವನ್ನು ನಮ್ಮ ಶಾಲೆಯಲ್ಲಿ ಮಾರ್ಚ್ 2 ಮತ್ತು 3 ರಂದು ನಡೆಸಲಾಯಿತು. ಇದಕ್ಕಾಗಿ ವಿಶೇಷ ತರಬೇತಿ ಪಡೆದ ನಮ್ಮ ಶಾಲೆಯ ಗಣಿತ ಅಧ್ಯಾಪಿಕೆ ಶ್ರೀಮತಿ ಪ್ರೇಮಲತಾ ಟೀಚರ್ ಹಾಗು ವಿಜ್ಞಾನ ಅಧ್ಯಾಪಿಕೆ ಶ್ರೀಮತಿ ಕಮಲಾಕ್ಷಿ ಟೀಚರ್ ನೇತೃತ್ವ ನೀಡಿದರು. ಅಲ್ಲದೆ ಉಳಿದ ಎಲ್ಲಾ ಅಧ್ಯಾಪಕರ ಸಹಕಾರದೊಂದಿಗೆ ಈ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ನಡೆಸಲಾಯಿತು. ಮಕ್ಕಳನ್ನು ಐದು ಗುಂಪುಗಳಾಗಿ ಮಾಡಲಾಯಿತು . ತ್ರಿಕೋನ, ಚೌಕ , ಆಯತ , ಪಂಚಭುಜ, ವೃತ್ತ ಎಂಬ ಐದು ಗುಂಪುಗಳಿಗೆ ಗಣಿತ ಪಝಲ್ , ಒರಿಗಾಮಿ, ಮೆಟ್ರಿಕ್ ಮೇಳ, ರಸಪ್ರಶ್ನೆ ಹಾಗೂ ವಿಜ್ಞಾನ ಪ್ರಯೋಗ ಎಂಬೀ ವಿಷಯಗಳಲ್ಲಿ ಸರದಿ ಪ್ರಕಾರ ಚಟುವಟಿಕೆಗಳನ್ನು ನೀಡಲಾಯಿತು. ಕೊನೆಗೆ ಮಕ್ಕಳ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಶಾಲಾ  ಮೆನೇಜರ್ , ಪಿ.ಟಿ. ಎ . ಹಾಗು ಮಾತೃ ಮಂಡಳಿಯ ಅಧ್ಯಕ್ಷರು ಭಾಗವಹಿಸಿ ಮಕ್ಕಳ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಸಪ್ರಶ್ನೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ಮಕ್ಕಳಿಗೆ ಪಾಯಸದ ಊಟವನ್ನು ವಿತರಿಸಲಾಯಿತು. 

Thursday, February 23, 2017

HELLO ENGLISH

HELLO ENGLISH- LERNING ENHANCEMENT PROGRAMME

Learning Enhancement Programme- HELLO ENGLISH conducted on 22.02.2017 in our School.
Our School manager Smt.Vijayashree B Inaugurated the programme. Our School PTA President Sri.John D'Souza Presided over the function. SDPHSS Dharmathadka Principal Sri.N.Ramachandra Bhat, Our MPTA President Smt.Bharathi K  felicitated. Sri. N Mahalinga Bhat, Headmaster of the school, welcomed all the dignifieds and Smt.Gayahri Kadambar  gave vote of thanks. Tanush Kumar N and Manojna CH anchored.
                                                Anchor - Manojna CH III Std
                                                    Prayer - By Students
                                                  Anchor - Tanush Kumar N III Std
          Welcome Speech -  N Mahalinga Bhat Headmaster
           Inauguration - Smt.Vijayashree B Manager of the School
 Felicitation By N Ramachandra Bhat, Principal, SDPHSS Dharmathadka


        Presidential Address by John D'Souza, PTA President
          Vote of thanks by Gayathri Kadambar, Teacher
                              Activities - Rhyme
                                             Game
                          English Skit - A Woodden Cup by VII Std Students






                                         Game
                                          Writing Activity




Friday, January 13, 2017

Kasaragod Revenue Dist School Kalothsavam

ತ್ರಿಕರಿಪುರದಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು.ಪಿ. ಸಂಸ್ಕ್ರತೋತ್ಸವದಲ್ಲಿ ಸಮಗ್ರ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ  ಮಂಜೇಶ್ವರ ಉಪಜಿಲ್ಲೆಯು ತನ್ನದಾಗಿಸಿಗೊಂಡಿದೆ . ಒಟ್ಟು ೮೮ ಅಂಕಗಳನ್ನು ಗಳಿಸಿದ ಮಂಜೇಶ್ವರ ಉಪಜಿಲ್ಲೆಯು ಚೆರುವತ್ತೂರು ಉಪಜಿಲ್ಲೆಯೊಂದಿಗೆ ಸಮಗ್ರ ಪ್ರಶಸ್ತಿಯನ್ನು ಹಂಚಿಕೊಂಡಿದೆ . ಇದರಲ್ಲಿ ನಮ್ಮ ಶಾಲೆಯ ಮಕ್ಕಳು ಉಪನ್ಯಾಸರಚನೆ , ಅಕ್ಷರಶ್ಲೋಕ , ಗಾನಾಲಾಪನ(ಹುಡುಗಿಯರು), ಪ್ರಭಾಷಣ ಮತ್ತು ಸಂಘಗಾನ  ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ಸ್ಪರ್ಧೆಗಳಲ್ಲಿ ಎ  ಗ್ರೇಡ್ ಪಡೆದು ೨೫ ಅಂಕಗಳನ್ನು ಪಡೆದು ಜಿಲ್ಲೆಯಲ್ಲಿ ಮೂರನೇ ಸ್ಥಾನವನ್ನು ಸಂಪಾದಿಸಿದ್ದಾರೆ. ಸಾಧನೆ ಮಾಡಿದ ಮಕ್ಕಳಿಗೆ ಅಭಿನಂದನೆಗಳು

Sunday, January 8, 2017

MATHS SEMINAR

ಹೊಸದುರ್ಗ ಬಿ. ಆರ್. ಸಿ. ಯಲ್ಲಿ 7.1.2017 ನೇ ಶನಿವಾರ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಗಣಿತ ಸೆಮಿನಾರಿನಲ್ಲಿ ನಮ್ಮ ಶಾಲೆಯ ಸಿಂಜಿತಾ ಕೆ. ಎ ಗ್ರೇಡ್ ಪಡೆದಿರುತ್ತಾಳೆ. ಅವಳಿಗೆ ಶಾಲಾ ಪರವಾಗಿ ಅಭಿನಂದನೆಗಳು

BIRTHDAY

 ನಮ್ಮ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಮಧುರ ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು . 
 ನಮ್ಮ ಶಾಲೆಯಲ್ಲಿ ಐದನೇ  ತರಗತಿಯಲ್ಲಿ ಕಲಿಯುತ್ತಿರುವ ಮಧುಶ್ರೀ  ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು .

Wednesday, January 4, 2017

STUDY TOUR

ಶೈಕ್ಷಣಿಕ ಪ್ರವಾಸ 
ನಮ್ಮ ಶಾಲೆಯಿಂದ ಈ  ವರ್ಷ  ವಯನಾಡು ಜಿಲ್ಲೆಯ ವಿವಿಧ ಸ್ಥಳಗಳಿಗೆ ಪ್ರವಾಸ ಕೈಗೊಂಡೆವು . ದಶಂಬರ ತಿಂಗಳಿನ 30 ಮತ್ತು 31 ರಂದು 38 ಮಕ್ಕಳು , 14 ಅಧ್ಯಾಪಕರು ಹಾಗೂ 5 ರಕ್ಷಕರು ಪ್ರವಾಸ ಹೋದೆವು . 30 ರಂದು ಬೆಳಗ್ಗೆ7.20 ಕ್ಕೆ ಧರ್ಮತ್ತಡ್ಕ ದಿಂದ ಹೊರಟು ನೀಲೇಶ್ವರ ,ಪಯ್ಯನ್ನೂರು , ತಳಿಪರಂಬ , ಇರಿಟ್ಟಿ ದಾರಿಯಾಗಿ ಪ್ರಯಾಣಿಸಿದ ನಾವು ಚಹಾ ತೋಟ ಕಾಪಿ ತೋಟ ಬಾಳೆ ತೋಟ ಗಳನ್ನೂ ವೀಕ್ಷಿಸುತ್ತಾ ಸಂಜೆ 4.30 ಕ್ಕೆ ವಯನಾಡಿನ ಮಾನಂತವಾದಿಗೆ  ತಲುಪಿದೆವು. ಅಲ್ಲಿ ಪಳಸ್ಸಿ ರಾಜನ ಸ್ಮಾರಕ ಹಾಗು ಮ್ಯೂಸಿಯಂ ನೋಡಿದೆವು . ಅಲ್ಲಿಂದ ಸುಲ್ತಾನ್ ಬತ್ತೇರಿಯ  ಕಡೆಗೆ ಪ್ರಯಾಣಿಸಿದೆವು. ರಾತ್ರಿ 8 ಕ್ಕೆ ಅಲ್ಲಿಗೆ ತಲುಪಿದೆವು. ವಯನಾಡು ಡಯೆಟ್ ನಲ್ಲಿ ವಸತಿಯ ವ್ಯವಸ್ಥೆ ಮಾಡಿದೆವು . 31 ರಂದು ಬೆಳಿಗ್ಗೆ ಎಡಕಲ್ಲು ಗುಡ್ಡವನ್ನು ಹತ್ತಿದೆವು. ಅಲ್ಲಿಯ ವಿಚಾರಗಳನ್ನು ಗೈಡ್ ಒಬ್ಬರು ವಿವರವಾಗಿ ತಿಳಿಸಿದರು . ಅಲ್ಲಿಂದ ಮಧ್ಯಾಹ್ನ ಭೋಜನ ಮುಗಿಸಿ ಕಲ್ಪೆಟ್ಟ ದಾರಿಯಾಗಿ ಬಾಣಾಸುರ ಸಾಗರ ಆಣೆಕಟ್ಟು ನೋಡಲು ಹೋದೆವು . ಬಳಿಕ ಪುನಃ ಮಾನಂತವಾಡಿ ದಾರಿಯಾಗಿ ನಮ್ಮ ಊರಿನ ಕಡೆಗೆ ಪ್ರಯಾಣ ಬೆಳೆಸಿ ಜನವರಿ 1 ರಂದು ಮುಂಜಾನೆ 4 ಗಂಟೆಗೆ ಶಾಲೆಗೆ ತಲುಪಿದೆವು .