FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, October 20, 2015

Social science -Still Model

GVHSS KUNJATHUR ನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ಯು. ಪಿ. ವಿಭಾಗದ Social Science Still Model ನಲ್ಲಿ ನಮ್ಮ ಶಾಲೆಯು ಪ್ರಥಮ ಸ್ಥಾನ ಪಡೆಯಿತು. ಏಳನೇ ತರಗತಿಯ ಅರ್ಪಿತಾ ಮತ್ತು ಚೈತ್ರ ಇದನ್ನು ಪ್ರದರ್ಶಿಸಿದರು.

IT FAIR SUB DIST CHAMPIONS

GVHSS KUNJATHUR  ನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ I.T. ಮೇಳದಲ್ಲಿ ಯು. ಪಿ. ವಿಭಾಗದಲ್ಲಿ 26 ಅಂಕಗಳೊಂದಿಗೆ ಸತತ ಐದನೇ ಬಾರಿಗೆ ನಮ್ಮ ಶಾಲೆ ಚಾಂಪ್ಯನ್ ಶಿಪ್ ಪಡೆಯಿತು. 

Friday, October 16, 2015

SKIT

ಕ್ಲೀನ್ ಸ್ಕೂಲ್ ಪ್ರೋಗ್ರಾಮ್ ನ ಭಾಗವಾಗಿ ಶಾಲಾ ಮಕ್ಕಳಿಂದ ಒಂದು ಚಿಕ್ಕ ಪ್ರಹಸನ ಕಾರ್ಯಕ್ರಮ ನಡೆಯಿತು. ಬೇಸ್ತು ಬಿದ್ದ ಈಡಿ ಎಂಬ ಪ್ರಹಸನವನ್ನು ಶಾಲಾ ಅಸೆಂಬ್ಲಿಯಲ್ಲಿ ಏಳನೇ ತರಗತಿಯ ಮಕ್ಕಳು ಪ್ರದರ್ಶಿಸಿದರು.

Thursday, October 15, 2015

GLOBAL HANDWASH DAY CELEBRATION


ಜಾಗತಿಕ ಕೈ ತೊಳೆಯುವ ದಿನವನ್ನು ಇಂದು (OCTOBER 15) ಆಚರಿಸಲಾಯಿತು. 
ಶಾಲಾ ಅಸೆಂಬ್ಲಿಯಲ್ಲಿ ಧರ್ಮತ್ತಡ್ಕ ಕುಟುಂಬ ಕಲ್ಯಾಣ ಕೇಂದ್ರದ ನರ್ಸ್ ಶ್ರೀಮತಿ ಲಕ್ಷ್ಮೀದೇವಿ ಅವರು ಕೈ ತೊಳೆಯುವುದರ ಅಗತ್ಯ , ತೊಳೆಯದೆ ಇರುವುದರಿಂದ ಆಗುವ ತೊಂದರೆಗಳು ಮತ್ತು ಕೈ ತೊಳೆಯುವ ವಿಧಾನವನ್ನು ಮಕ್ಕಳಿಗೆ ಹೇಳಿಕೊಟ್ಟರು. 
ಅನಂತರ ಎಲ್ಲ ತರಗತಿಯ ಮಕ್ಕಳೂ ಅವರು ಹೇಳಿಕೊಟ್ಟ ರೀತಿಯಲ್ಲಿ  ಸಾಬೂನು ಉಪಯೋಗಿಸಿ ಕೈತೊಳೆದು ಸ್ವಚ್ಚಗೊಳಿಸಿದರು. 





ಬಳಿಕ ಎಲ್ಲಾ ಮಕ್ಕಳು ಶಾಲಾ ಮೈದಾನದಲ್ಲಿ ಕೈಗಳನ್ನು ಎತ್ತಿ ಹಿಡಿದು ಜೋಡಿಸಿ" ಶುಚಿತ್ವ ಅಭ್ಯಾಸವು ನನ್ನ ಗುರಿಯಾಗಿದೆ. ಈ ಗುರಿಯನ್ನು ತಲುಪಲು ಆಹಾರ ಸೇವನೆಯ ಮೊದಲು ಹಾಗೂ ಶೌಚಾಲಯವನ್ನು ಬಳಸಿದ ನಂತರ ಕೈಗಳನ್ನು ಸಾಬೂನು ಬಳಸಿ ಶುಚಿಗೊಳಿಸುವೆನು" ಎಂದು ಪ್ರತಿಜ್ಞೆಗೈದರು. 




Making Poster

ಕ್ಲೀನ್ ಸ್ಕೂಲ್ ಪ್ರೊಗ್ರಾಮ್ ನ ಅಂಗವಾಗಿ ದಿನಾಂಕ 12.10.2015 ರಂದು ನಮ್ಮ ಶಾಲೆಯಲ್ಲಿ ಯು. ಪಿ. ಮಕ್ಕಳಿಗೆ ಪರಿಸರ ಶುಚೀಕರಣದಲ್ಲಿ ನನ್ನ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ರಚನಾ ಸ್ಪರ್ಧೆಯನ್ನು ಯಲ್. ಪಿ. ಮಕ್ಕಳಿಗೆ ಪೋಸ್ಟರ್ ನಿರ್ಮಾಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಅದರಲ್ಲಿ ಗೆದ್ದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. 







Friday, October 9, 2015

Sports Day

ಶಾಲಾ ಮಟ್ಟದ ವಾರ್ಷಿಕ ಕ್ರೀಡಾ ಕೂಟ ಇಂದು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರು  ಔಪಚಾರಿಕವಾಗಿ ಉದ್ಘಾಟಿಸಿದರು. ಮಕ್ಕಳನ್ನು ನಾಲ್ಕು ಮನೆಗಳಾಗಿ ಮಾಡಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. 





ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯಾಯರು ಪ್ರಮಾಣಪತ್ರಗಳನ್ನು ವಿತರಿಸಿದರು.

Wednesday, September 30, 2015

NAVOLLASA SANSKRIT CAMP



ಮಂಜೇಶ್ವರ ಸಂಸ್ಕ್ರತ ಕೌನ್ಸಿಲ್ ನ ಆಶ್ರಯದಲ್ಲಿ ಶ್ರೀರಾಮಾ ಎ.ಯು.ಪಿ. ಶಾಲೆ ಕುಬಣೂರು ಇಲ್ಲಿ ಇಂದು ಎಲ್.ಪಿ. ವಿಭಾಗದ ಮೂರು ಮತ್ತು ನಾಲ್ಕನೇ ತರಗತಿಯ  ಸಂಸ್ಕ್ರತ  ಮಕ್ಕಳಿಗಾಗಿ ನವೋಲ್ಲಾಸ ಎಂಬ ಒಂದು  ದಿನದ ಶಿಬಿರ ನಡೆಯಿತು . ಇದರಲ್ಲಿ ನಮ್ಮ ಶಾಲೆಯಿಂದ ಹನ್ನೆರಡು ಮಕ್ಕಳು ಭಾಗವಹಿಸಿದರು.