FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, June 8, 2016

ENVIRONMENT DAY PLEDGE

ವಿಶ್ವ ಪರಿಸರ ದಿನದ ಭಾಗವಾಗಿ ಅಮ್ಮ ಶಾಲಾ ಅಸೆಂಬ್ಲಿಯಲ್ಲಿ ಮಕ್ಕಳು ಹಾಗೂ ಅಧ್ಯಾಪಕರು ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಜ್ಞೆ ಗೈದೆವು . ಶಾಲಾ ಮುಖ್ಯೋಪಾಧ್ಯಾಯರು ಪ್ರತಿಜ್ಞೆ ಬೋಧಿಸಿದರು. " ಪರಿಸರ, ವನ,ವನ್ಯಜೀವಿಗಳು, ಹೊಳೆ , ನದಿಗಳು, ತಣ್ಣೀರು ತಟಾಕಗಳುಇತ್ಯಾದಿಗಳನ್ನು ಸಂರಕ್ಷಿಸುವುದು ನನ್ನ ಮೂಲಭೂತ ಕರ್ತವ್ಯವಾಗಿದೆ . ಎಲ್ಲಾ ಜೀವ ಜಾಲಗಳ ಬಗ್ಗೆ ನನಗೆ ಸಹಾನುಭೂತಿಯಿದೆ .ಕಾಡು, ವನ್ಯಜೀವಿಗಳ ಮೇಲೆ ಉಂಟಾಗುವ ದುಷ್ಕ್ರತ್ಯಗಳಾಗಲೀ  ಅನಧಿಕ್ರತ ವ್ಯಾಪಾರವಾಗಲೀ ನನ್ನ ಗಮನಕ್ಕೆ ಬಂದರೆ ಕೂಡಲೆ ಅರಣ್ಯಾಧಿಕಾರಿಗಳಿಗೆ ತಿಳಿಸುತ್ತೇನೆ .ಪರಿಸರ, ಕಾಡು ,ವನ್ಯಜೀವಿಗಳು , ನೀರಿನ ತಟಾಕಗಳು ಇತ್ಯಾದಿಗಳನ್ನು ಸಂರಕ್ಷಿಸುತ್ತೇನೆಂದೂ   ವನ್ಯಜೀವಿಗಳ ಯಾವುದೇ ರೀತಿಯ ಅನಧಿಕ್ರತ ಉತ್ಪನ್ನಗಳನ್ನು ಎಂದಿಗೂ ನಾನು ಉಪಯೋಗಿಸುವುದಿಲ್ಲ ಎಂದೂ  ಈ ಮೂಲಕ ಪ್ರತಿಜ್ಞೆ  ಗೈಯುತ್ತೇನೆ ". ಬಳಿಕ ಎಲ್ಲಾ ತರಗತಿಗಳಲ್ಲಿ ಪರಿಸರ ದಿನದ ಕುರಿತು ಘೋಷಣಾ ವಾಕ್ಯಗಳು, ಪೋಸ್ಟರ್ , ಚಿತ್ರರಚನೆ ಮೊದಲಾದ ಚಟುವಟಿಕೆಗಳನ್ನು ನಡೆಸಲಾಯಿತು. 

Thursday, June 2, 2016

HEALTH PLEDGE

ಕೇರಳ ರಾಜ್ಯದ ಆರೋಗ್ಯ ಇಲಾಖೆ ಜ್ಯಾರಿಗೊಳಿಸಿದ ಸಾಂಕ್ರಾಮಿಕ ರೋಗ ನಿಯಂತ್ರಣ ಯಜ್ಞದ ಭಾಗವಾಗಿ ಶಾಲಾ ಆರೋಗ್ಯ ಸಂಘದ ನೇತ್ರತ್ವದಲ್ಲಿ ಪರಿಸರ ಶುಚೀಕರಣದ ಕುರಿತು  ಪ್ರತಿಜ್ಞೆ ಗೈಯಲಾಯಿತು .

SCHOOL PRAVESHOTSAVAM 2016

ಶಾಲಾ ಪ್ರವೇಶೋತ್ಸವ 
ನಮ್ಮ ಶಾಲಾ ಪ್ರವೇಶೋತ್ಸವವು ಬಹಳ ಸಂಭ್ರಮದಿಂದ  ನಡೆಯಿತು. ಹೊಸತಾಗಿ ಶಾಲೆಗೆ  ದಾಖಲಾದ ಮಕ್ಕಳನ್ನು ಹಳೆ ವಿದ್ಯಾರ್ಥಿಗಳು , ರಕ್ಷಕರು  ಹಾಗೂ ಅಧ್ಯಾಪಕರು ಸೇರಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.  ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತು ಕ್ಷೇಮ ಸಮಿತಿ ಚೆಯರ್ ಮ್ಯಾನ್  ಶ್ರೀ ಚನಿಯ ಪಾಡಿ ಅವರು ಉದ್ಘಾಟಿಸಿದರು. ಶಾಲಾ ಪಿ.ಟಿ.ಎ.ಅಧ್ಯಕ್ಷ ಶ್ರೀ ಜೋನ್ ಡಿ.ಸೋಜ ಅವರು ಸಮಾರಂಭದ  ವಹಿಸಿದರು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಅವರು ಹೊಸ ಶಿಕ್ಷಣಿಕ ವರ್ಷಕ್ಕೆ ಶುಭವನ್ನು   ಕೋರಿದರು. ನವಾಗತ  ಮಕ್ಕಳಿಗೆ ಕಲಿಕಾ ಕಿಟ್ ನ್ನು ಶಾಲಾ ಮೆನೇಜರ್ ವಿತರಿಸಿದರು.  ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನೂ  ಗಾಯತ್ರಿ ಟೀಚರ್ ವಂದನಾರ್ಪಣೆ ಗೈದರು . ರಾಮ ಮೋಹನ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಈ ವರ್ಷ ಹೊಸತಾಗಿ  ಪ್ರಾರಂಭ ಗೊಂಡ ಪ್ರೀ  ಪ್ರೈಮರಿ ವಿಭಾಗವನ್ನು ವಾರ್ಡು ಸದಸ್ಯ ಚನಿಯ ಪಾಡಿ ಅವರು ಉದ್ಘಾಟಿಸಿದರು. ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಪ್ರವೇಶೋತ್ಸವ ಗೀತೆಯನ್ನು  ಮಕ್ಕಳಿಂದ ಹಾಡಿಸಿದರು. ಬಳಿಕ  ನವಾಗತ ಮಕ್ಕಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು. 
 ಶಾಲಾ ಪ್ರವೇಶೋತ್ಸವಕ್ಕೆ ವಿಜ್ಞಾನ ಸಂಘದ ವತಿಯಿಂದ ದ್ವಿದಳ ಧಾನ್ಯಗಳನ್ನು ಬಳಸಿ ತಯಾರಿಸಲಾದ  ಆಕರ್ಷಕ ಪೋಸ್ಟರ್. 
                            ಪುಟಾಣಿಗಳಿಂದ  ಪ್ರಾರ್ಥನೆ
                ಶಾಲಾ ಮೆನೇಜರ್  ಅವರಿಂದ ಕಲಿಕಾ ಕಿಟ್ ವಿತರಣೆ

ಪಂಚಾಯತು ಸದಸ್ಯ ಚನಿಯ ಪಾಡಿ ಅವರಿಂದ ಶಾಲಾ ಪ್ರವೇಶೋತ್ಸವ ಉದ್ಘಾಟನೆ

              ಪಿ.ಟಿ.ಎ. ಅಧ್ಯಕ್ಷ ಜೋನ್ ಡಿ.ಸೋಜ ಅವರಿಂದ ಅಧ್ಯಕ್ಷ ಭಾಷಣ
                      ನವಾಗತ ಮಕ್ಕಳನ್ನು ಸ್ವಾಗತಿಸುವ ಮೆರವಣಿಗೆ

WELCOME TO NEW ACADEMIC YEAR

ಹೊಸ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ  ಸ್ವಾಗತ.

Thursday, May 26, 2016

CONGRATULATIONS

ನಮ್ಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಜೋವಿನ್ ಡೆಲ್ ರಾಯ್ ಕಳೆದ ಫೆಬ್ರವರಿ ತಿಂಗಳಿನಲ್ಲಿ ಜರಗಿದ LSS Scholarship ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಸ್ಕಾಲರ್ಷಿಪ್ ಗೆ ಅರ್ಹತೆಯನ್ನು ಗಳಿಸಿರುತ್ತಾನೆ . ಅವನಿಗೆ ಶಾಲಾ ಪರವಾಗಿ ಅಭಿನಂದನೆಗಳು .

Thursday, April 14, 2016

VACATION TRAINING

ರಜಾಕಾಲದ ಅಧ್ಯಾಪಕ ತರಬೇತಿ 
2016-17 ಶೈಕ್ಷಣಿಕ ವರ್ಷದ ರಜಾ ಕಾಲದ ತರಬೇತಿಯು  ಮೂರು ಹಂತಗಳಲ್ಲಿ ನಡೆಯಲಿರುವುದು.  ಏಪ್ರಿಲ್ 26 - 30 ; ಮೇ 2 - 6  ಮತ್ತು ಮೇ 23 - 27 ಹೀಗೆ ಮೂರು ಬ್ಯಾಚ್ ಗಳಲ್ಲಿ ತರಬೇತಿ ನಡೆಯಲಿದೆ 
FIRST SPELL : APRIL 26 - 30  ; VENUE: SSBAUPS AILA

VORKADY, MEENJA,MANJESHWAR - 1  &  3 STD KANNADA
MANGALPADY, PAIVALIKE NON PEC - 2 & 4 STD KANNADA
 2 STD Malayalam
U.P.SOCIAL SCIENCE
U.P.MALAYALAM & SOCIAL SCIENCE @ GUPS KASARAGOD

SECOND SPELL: MAY 2 - 6  VENUE: SSBAUPS AILA

VORKADY, MEENJA,MANJESHWAR - 2 STD KANNADA
MANGALPADY, PAIVALIKE NON PEC - 1 STD KANNADA 
3 STD MALAYALAM, 
L.P.ARABIC,
U.P.KANNADA, & MATHS
U.P. BASIC SCIENCE(MALAYALAM) @ GUPS KASARAGOD

THIRD SPELL: MAY 23 - 27 VENUE: SSBAUPS AILA

VORKADY, MEENJA,MANJESHWAR- 4 STD KANNADA
MANGALPADY, PAIVALIKE NON PEC -  3 STD KANNADA
1 STD MALAYALAM
U.P. BASIC SCIENCE, ENGLISH, HINDI .
U.P.URDU, UP ARABIC @ GUPS KASARAGOD.
All Headmaters must attend in FIRST SPELL

HAPPY VISHU


ನಾಡಿನ ಸಮಸ್ತ ಬಾಂಧವರಿಗೆ ವಿಷು ಹಬ್ಬದ ಹಾರ್ದಿಕ ಶುಭಾಶಯಗಳು. 
                   ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು