FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, June 25, 2016

FAREWELL PARTY



ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ತರಬೇತುದಾರರಾಗಿಯೂ  ಬಿ.ಪಿ.ಓ ಆಗಿಯೂ  ಐದು  ವರ್ಷಗಳನ್ನು ಪೂರೈಸಿ ಇದೀಗ ತಮ್ಮ ಮಾತೃ  ಶಾಲೆಯನ್ನು ಸೇರಿದ ಶ್ರೀ ವಿಜಯ ಕುಮಾರ್ ಸರ್ ಅವರಿಗೆ ಇಂದು ಮಂಜೇಶ್ವರ ಉಪಜಿಲ್ಲೆಯ ಮುಖ್ಯೋಪಾಧ್ಯಾಯರ ವತಿಯಿಂದ ಸನ್ಮಾನವನ್ನು ಏರ್ಪಡಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಸರ್ ಅವ್ರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಮಂಜೇಶ್ವರ ಬಿ.ಪಿ.ಓ ಶ್ರೀ ಮೊಹಮ್ಮದ್ ಸಾಲಿ ಮಾಸ್ಟರ್, ಮಾಯಿಪ್ಪಾಡಿ ಡಯೆಟ್ ಪ್ಯಾಕಲ್ಟಿ  ಡಾ.ರಘುರಾಮ್ ಭಟ್ ಶುಭಹಾರೈಸಿದರು.

Friday, June 24, 2016

SCHOOL PARLIAMENT ELECTION

ಶಾಲಾ ಪಾರ್ಲಿಮೆಂಟ್ ಚುನಾವಣೆ 
ಶಾಲಾ ಶಾಂತಿ ಸಮಾಜದ ಮಂತ್ರಿ ಮಂಡಲ ರೂಪೀಕರಣಕ್ಕಾಗಿ  ನಮ್ಮ ಶಾಲೆಯಲ್ಲಿ ಇಂದು ಚುನಾವಣೆ ನಡೆಯಿತು. ಸಾರತ್ರಿಕ ಮಹಾ ಚುನಾವಣೆಯ ಮಾದರಿಯಲ್ಲೇ ಇದು ನಡೆಯಿತು. ಚುನಾವಣೆಯ  ಅಧಿಸೂಚನೆ ಹೊರಡಿಸಲಾಯಿತು. ಅನಂತರ ನಾಯಕನ ಸ್ಥಾನಕ್ಕೆ ಅಭ್ಯರ್ಥಿಗಳು ನಾಮ ಪತ್ರ  ಸಲ್ಲಿಸಿದರು. ನಾಮಪತ್ರಗಳ ಸೂಕ್ಷ್ಮ ಪರಿಶೋಧನೆಯ ಬಳಿಕ ಅಂತಿಮವಾಗಿ ನಾಲ್ಕು ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದರು. ಇಂದು ಎಲ್ಲ ತರಗತಿಯ ಮಕ್ಕಳು ಮಹಾಚುನಾವಣೆಯ ಮಾದರಿಯಲ್ಲಿ ಮತಚಲಾಯಿಸಿದರು. ಎಲ್ಲ ಮಕ್ಕಳಿಗೂ ಬ್ಯಾಲೆಟ್ ಪೇಪರ್ ಕೊಟ್ಟು,  ಅದರಲ್ಲಿ ಗುರುತಿನ ಸೀಲ್ ಹಾಕಿ ಮತಚಲಾಯಿಸಿದರು . ಚುನಾವಣಾ ಕರ್ತವ್ಯಗಳನ್ನು (ಪ್ರಿಸೈಡಿಂಗ್ ಆಫೀಸರ್, ಪೋಲಿಂಗ್ ಆಫೀಸರ್ಸ್ ) ಮಕ್ಕಳೇ ನಿರ್ವಹಿಸಿದರು . ಅಂತಿಮವಾಗಿ ಏಳನೇ ತರಗತಿಯ ಪಾತಿಮಾತ್ ಜಸೀರಾ ಶಾಲಾ ನಾಯಕಿಯಾಗಿ ಆಯ್ಕೆ ಆಡಲು. ಉಪನಾಯಕನಾಗಿ ಜೆಲ್ಲೆಸ್ಪಿ ರಾಯ್ ಆರಿಸಲ್ಪಟ್ಟನು. 
                                                           ಪೋಲಿಂಗ್ ಆಫೀಸರ್ಸ್

                                                               ಪ್ರಿಸೈಡಿಂಗ್ ಆಫೀಸರ್
                                          ಗುರುತಿನ ಶಾಯಿ ಹಾಕುತ್ತಿರುವುದು

                                                  ಮತದಾರರ ಸಾಲು
                                                               ಅಭ್ಯರ್ಥಿಗಳ ಪಟ್ಟಿ         


                                      ಮತದಾನ
                                                           ಮತ ಎಣಿಕೆ

SAHITHYA QUIZ

ಸಾಹಿತ್ಯ ಕ್ವಿಜ್ 
ವಾಚನಾ ವಾರಾಚರಣೆಯ ಭಾಗವಾಗಿ ನಮ್ಮ ಶಾಲೆಯಲ್ಲಿ  ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ  ಮಲ್ಟಿ ಮೀಡಿಯಾ ಉಪಯೋಗಿಸಿ ಸಾಹಿತ ರಸಪ್ರಶ್ನೆ ಕಾರ್ಯಕ್ರಮ ಜರಗಿತು. ಹಿರಿಯ ಅಧ್ಯಾಪಕ ಶ್ರೀನಿವಾಸ ಮಾಸ್ಟರ್ ಈ  ರಸಪ್ರಶ್ನೆ ಕಾರಾಕ್ರಮವನ್ನು ನಡೆಸಿಕೊಟ್ಟರು. ಸುಮಾರು 75 ಕ್ಕೂ ಅಧಿಕ ಮಕ್ಕಳು ಇದರಲ್ಲಿ ಭಾಗವಹಿಸಿದರು. ಏಳನೇ ತರಗತಿಯ ಸಿಂಜಿತಾ ಪ್ರಥಮ, ಶಾರದಾ ಸುರಭಿ ದ್ವಿತೀಯ , ಮಧುರಾ ತೃತೀಯ ಸ್ಥಾನವನ್ನು ಪಡೆದರು. ವಿಜೇತರನ್ನು ಅಭಿನಂದಿಸಲಾಯಿತು 






Thursday, June 23, 2016

NEWS READING

ಓದುವ ವಾರಾಚರಣೆಯ ಭಾಗವಾಗಿ  ನಮ್ಮ ಶಾಲೆಯಲ್ಲಿ ವಾರ್ತೆ ಓದುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಉತ್ತಮ ಓದುಗರನ್ನು ಮಕ್ಕಳೇ ಆರಿಸಿದರು. 








 

Tuesday, June 21, 2016

SPARK BANK DETAILS

SPARK NEWS

As per GO-P-402/2011/Fin and GO-P-57/2013/Fin, the salary disbursement of employees (who opt payment through accounts) are permitted through Public Sector Bank accounts or TSB accounts only. Hence all DDOs are requested to update the employee"s bank accounts in PSBs or TSB only. Based on the list from RBI, wrongly entered bank details are hereby removed from SPARK and hence it is requested to ensure the account details of employees before processing their salary or other claims without fail  
LIST OF PUBLIC SECTOR BANKS
    1.ALLAHABAD BANK
    2.ALLBANK FINANCE LTD.
    3.ANDHRA BANK
    4.BANK OF BARODA
    5.BANK OF INDIA
    36.BANK OF MAHARASHTRA
    7.CANARA BANK
    8.CENTRAL BANK OF INDIA
    9.CORPORATION BANK
    10.DENA BANK
    11.EXPORT-IMPORT BANK OF INDIA
    12.IDBI BANK LTD.
    13.IND BANK HOUSING LTD.
    14.INDBANK MERCHANT BANKING SERVICES LTD.
    15.INDIAN BANK
    16.INDIAN OVERSEAS BANK
    17.JAMMU & KASHMIR BANK LTD.,THE
    18.NATIONAL BANK FOR AGRICULTURE & RURAL DEVELOPMENT
    19.NATIONAL HOUSING BANK
    20.ORIENTAL BANK OF COMMERCE
    21.PNB GILTS LTD.
    22.PUNJAB & SIND BANK
    23.PUNJAB NATIONAL BANK
    24.SBI CAPITAL MARKETS LTD.
    25.STATE BANK OF BIKANER & JAIPUR
    26.STATE BANK OF HYDERABAD
    27.STATE BANK OF INDIA
    28.STATE BANK OF MYSORE
    29.STATE BANK OF PATIALA
    30.STATE BANK OF TRAVANCORE
    31.SYNDICATE BANK
    32.UCO BANK
    33.UNION BANK OF INDIA
    34.UNITED BANK OF INDIA
    35.VIJAYA BANK
LIST OF BANKS ADDED IN SPARK DATABASE
1.ANDHRA BANK
2.BANK OF BARODA
3.BANK OF INDIA
4.CANARA BANK
5.CENTRAL BANK OF INDIA
6.CORPORATION BANK
7.IDBI BANK LTD.
8.INDIAN BANK
9.INDIAN OVERSEAS BANK
10.ORIENTAL BANK OF COMMERCE
11.PUNJAB NATIONAL BANK
12.STATE BANK OF HYDERABAD
13.STATE BANK OF INDIA
14.STATE BANK OF MYSORE
15.STATE BANK OF PATIALA
16.STATE BANK OF TRAVANCORE
17.SYNDICATE BANK
18.UCO BANK
19.UNION BANK OF INDIA
20.UNITED BANK OF INDIA
21.VIJAYA BANK
22.TREASURY SAVINGS BANK(TSB)

INTERNATIONAL YOGA DAY

 ನಮ್ಮ ಶಾಲೆಯಲ್ಲಿ ದಿನಾಂಕ 21-06-2016ನೇ ಮಂಗಳವಾರ ಎರಡನೇ ಅಂತರ ರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕುರುಡಪದವು ಶಾಲೆಯ ನಿವೃತ್ತ ಅಧ್ಯಾಪಕ ಶ್ರೀ ಕುರಿಯ ಕೃಷ್ಣ ಭಟ್ ಅವರು ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ  ಉದ್ಘಾಟಿಸಿದರು. 



ಯೋಗದ ಮಹತ್ವದ ಬಗ್ಗೆ ಮಕ್ಕಳಿಗೆ ವಿವರವಾಗಿ ತಿಳಿಸಿದರು . ಮಕ್ಕಳಿಂದ ಕೆಲವು ಯೋಗಾಭ್ಯಾಸಗಳನ್ನು ಮಾಡಿಸಿದರು. ಇನ್ನು ಕೆಲವು ಆಸನ ಗಳನ್ನು  ಅವರು ಮಾಡಿ ತೋರಿಸಿದರು . 



                      Welcome speech by Shrinivasa Sir
                                     Prayer  by Students

                        Presidential Address by Headmaster
Vote of thanks by Krishna Prasad.K

READING WEEK

ದಿನಾಂಕ 20-06-2016 ನೇ ಸೋಮವಾರ  ಕೇರಳ ಗ್ರಂಥ ಶಾಲಾ ಸಂಘದ ಸ್ಥಾಪಕರಾದ ದಿ .ಪಿ.ಎಂ.ಪಣಿಕ್ಕರ್ ಅವರ ನೆನಪಿಗಾಗಿ ವಾಚನಾ ದಿನವನ್ನಾಗಿ ಆಚರಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಅಧ್ಯಾಪಕರಾದ ಶ್ರೀ ಅಶೋಕ್ ಕುಮಾರ್ ಪಿ. ಅವರು ಕಾರ್ಯಕ್ರಮವನ್ನು ಔಪಚಾರಿಕವಾಗಿ  ಉದ್ಘಾಟಿಸಿದರು.
ಅದರ ಜೊತೆಗೆ ಶಾಲೆಯ ವಿವಿಧ ಕ್ಲಬ್ ಗಳನ್ನು ಅವರು ಉದ್ಘಾಟಿಸಿದರು. 
ಶಾಲಾ ಮುಖ್ಯೋಪಾಧಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಆರ್.ಜಿ. ಸಂಚಾಲಕ ಶ್ರೀನಿವಾಸ ಮಾಸ್ಟರ್ ಸ್ವಾಗತಿಸಿದರು. 
                        ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು. 
 ಸಹಾಯಕ ಅಧ್ಯಾಪಕ ಶಂಕರನಾರಾಯಣ ಭಟ್ ವಿವಿಧ ಕ್ಲಬ್ ಗಳ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು. ವಿದ್ಯಾರಂಗದ ಸಂಚಾಲಕ ನರೇಶ್ ಮಾಸ್ಟರ್ ವಂದನಾರ್ಪಣೆಗೈದರು . ಶಾಲಾ ಅಧ್ಯಾಪಕ ರಾಮಮೋಹನ್ ಸಿ. ಯಚ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ವರ್ಷದ ವಾಚನಾ ಸಪ್ತಾಹದಲ್ಲಿ ಪುಸ್ತಕ ವಿತರಣೆ, ಸಾರ್ವಜನಿಕ ಗ್ರಂಥಾಲಯಕ್ಕೆ  ಭೇಟಿ , ಉತ್ತಮ ಓದುಗರ ಆಯ್ಕೆ, ಸಾಹಿತ್ಯ ರಸಪ್ರಶ್ನೆ ಮೊದಲಾದ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಇವಿಧ ಕ್ಲಬ್ ಗಳ ಪದಾಧಿಕಾರಿಗಳು ಈ ವರ್ಷ ಕ್ಲಬ್ ಗಳು ನಡೆಸುವ ವಿವಿಧ ಚಟುವಟಿಕೆಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. 

Monday, June 20, 2016

PAYAR LAB

ಅಂತರ ರಾಷ್ಟ್ರೀಯ ದ್ವಿದಳ ಧಾನ್ಯ   ವರ್ಷಾಚರಣೆಯ ಭಾಗವಾಗಿ ನಮ್ಮ ಶಾಲೆಯಲ್ಲಿ ತಯಾರಿಸಿದ PAYAR LAB. ಶಾಲಾ ವಿಜ್ಞಾನ ಸಂಘದ ಸಂಚಾಲಕಿ  ಸೌಮ್ಯ ಶಂಕರಿ ಟೀಚರ್ ಹಾಗೂ ವಿಜ್ಞಾನ ಅಧ್ಯಾಪಕಿ ಕಮಲಾಕ್ಷಿ ಟೀಚರ್ ಇದನ್ನು  ನಿರ್ಮಿಸಲು ಸಹಕರಿಸಿದರು. PAYAR LAB ನ್ನು ಶಾಲಾ ಮುಖ್ಯೋಪಾಧ್ಯಾಯರಾದ ಯನ್ . ಮಹಾಲಿಂಗ ಭಟ್ ಅವರು ಉದ್ಘಾಟಿಸಿದರು. 

ಮಕ್ಕಳು ವಿವಿಧ ದ್ವಿದಳ ಧಾನ್ಯಗಳನ್ನು ವೀಕ್ಷಿಸುತ್ತಿರುವುದು

Tuesday, June 14, 2016

ಬಯಲು ಪ್ರವಾಸ 
ಎರಡನೆ ತರಗತಿಯ ಮಕ್ಕಳು ಹಳ್ಳಿಯ ಸೊಬಗು ಎಂಬ ಪಾಠಕ್ಕೆ ಸಂಬಂಧಿಸಿ ಇಂದು ಬಯಲು ಪ್ರವಾಸ ಕೈಗೊಂಡರು . ಶಾಲಾ ಪರಿಸರದಲ್ಲಿ ಸುತ್ತಾಡಿ ಗುಡ್ಡ , ಬೆಟ್ಟ,  ಹಳ್ಳ ,  ಕೊಳ , ದೂರದಲ್ಲಿ ಕಾಣುವ ಸಮುದ್ರ , ತೆಂಗಿನ ತೋಟ , ಅಡಿಕೆ ತೋಟ ,ಹಕ್ಕಿಗಳ ಚಿಟ್ಟೆಗಳ  ಹಾರಾಟ   ಹಾಗೂ  ಇಂಚರ  ಇತ್ಯಾದಿ ಹಳ್ಳಿಯ ಸೊಬಗನ್ನು ಸವಿದರು.