ಸೇವೆಯಿಂದ ನಿವ್ರತ್ತಿ ಹೊಂದುತ್ತಿರುವ ಶ್ರೀಯುತರಿಗೆ ಶಾಲಾ ಪ್ರಬಂಧಕರು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಗೌರವಿಸಿದರು. ಪಿಟಿಎ ಅಧ್ಯಕ್ಷ ವೆಂಕಟರಾಜ ನೀರಮೂಲೆ ಪುಷ್ಪಗುಚ್ಚವನ್ನು ನೀಡಿ ಅಭಿನಂದಿಸಿದರು . ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಸ್ಮರಣಿಕೆಯನ್ನು ನೀಡಿದರು.
ಹೈಸ್ಕೂಲಿನ ವತಿಯಿಂದ ಹೈಸ್ಕೂಲ್ ಮೇನೇಜರ್ ಮುಖ್ಯೋಪಾಧ್ಯಾಯರು ಮತ್ತು ಸಹ ಅಧ್ಯಾಪಕರು ಸೇರಿ ಶಾಲು ಫಲಪುಷ್ಪ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಬಳಿಕ ಯು.ಪಿ. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ, ಹೈಸ್ಕೂಲ್ ಮೇನೇಜರ್ ಶ್ರೀ ಶಂಕರನಾರಾಯಣ ಭಟ್, ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಯನ್. ರಾಮಚಂದ್ರ ಭಟ್ ಪಿ.ಟಿ.ಎ. ಅಧ್ಯಕ್ಷ ವೆಂಕಟರಾಜ ನೀರಮೂಲೆ ನಿವ್ರತ್ತರಾಗುವವರಿಗೆ ಶುಭ ಹಾರೈಸಿದರು. ಅಧ್ಯಾಪಕರ ವತಿಯಿಂದ ಶ್ರೀ ರಾಮಮೋಹನ್ ಮಾಸ್ಟರ್, ಶ್ರೀನಿವಾಸ ಮಾಸ್ಟರ್, ಗೋವಿಂದ ಭಟ್ ಇ.ಎಚ್. ಸತ್ಯವತಿ ಟೀಚರ್, ಸತೀಶ್ ಕುಮಾರ್ ಮಾಸ್ಟರ್, ಶ್ರೀನಿವಾಸ ಮಾಸ್ಟರ್ ಮೊದಲಾದವರು ಶುಭಹಾರೈಸಿದರು. ನಿವ್ರತ್ತರಾಗುವ ಶ್ರೀ ಎನ್. ಎಚ್.ಲಕ್ಷ್ಮೀನಾರಾಯಣ ಭಟ್ಟರು ತಮ್ಮ 32 ವರ್ಷಗಳ ಅಧ್ಯಾಪನದ ಅನುಭವಗಳನ್ನು ಹಂಚಿಕೊಂಡರು. ಹೈಸ್ಕೂಲ್ ಅಧ್ಯಾಪಕ ಶ್ರೀ ಇ.ಎಚ್. ಗೋವಿಂದ ಭಟ್ ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಗೈದರು. ಶ್ರೀನಿವಾಸ ಕೆ.ಎಚ್. ಕಾರ್ಯಕ್ರಮವನ್ನು ನಿರೂಪಿಸಿದರು.