FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, September 30, 2015

NAVOLLASA SANSKRIT CAMP



ಮಂಜೇಶ್ವರ ಸಂಸ್ಕ್ರತ ಕೌನ್ಸಿಲ್ ನ ಆಶ್ರಯದಲ್ಲಿ ಶ್ರೀರಾಮಾ ಎ.ಯು.ಪಿ. ಶಾಲೆ ಕುಬಣೂರು ಇಲ್ಲಿ ಇಂದು ಎಲ್.ಪಿ. ವಿಭಾಗದ ಮೂರು ಮತ್ತು ನಾಲ್ಕನೇ ತರಗತಿಯ  ಸಂಸ್ಕ್ರತ  ಮಕ್ಕಳಿಗಾಗಿ ನವೋಲ್ಲಾಸ ಎಂಬ ಒಂದು  ದಿನದ ಶಿಬಿರ ನಡೆಯಿತು . ಇದರಲ್ಲಿ ನಮ್ಮ ಶಾಲೆಯಿಂದ ಹನ್ನೆರಡು ಮಕ್ಕಳು ಭಾಗವಹಿಸಿದರು. 

VEGETABLE SEED DISTRIBUTION




ಎಲ್ಲ  ಮಕ್ಕಳಿಗೂ ತರಕಾರಿ ಬೀಜ , ಎಲ್ಲ ಶಾಲೆಗಳಿಗೂ ತರಕಾರಿ ತೋಟ ಎಂಬ ಯೋಜನೆಯಂತೆ ಕೇರಳ ಸರಕಾರದ ಕ್ರಷಿ ಇಲಾಖೆಯವರು ಕ್ರಷಿ ಭವನದ ಮೂಲಕ ಶಾಲಾ ಮಕ್ಕಳಿಗೆ ಪ್ರತಿ ವರ್ಷದಂತೆ ಈ ವರ್ಷ   ಒದಗಿಸಿದ ತರಕಾರಿ ಬೀಜಗಳ ಕಿಟ್ ನ್ನು ಶಾಲಾ ಅಸೆಂಬ್ಲಿಯಲ್ಲಿ ಮಕ್ಕಳಿಗೆ ವಿತರಿಸಲಾಯಿತು.

BIRTHDAY

ನಮ್ಮ ಶಾಲೆಯ ಮೂರನೆ ತರಗತಿಯ ವಿದ್ಯಾರ್ಥಿ ವಿವೇಕ ರಾಮ ತನ್ನ ಹುಟ್ಟು ಹಬ್ಬವನ್ನು ಆಚರಿಸಿದನು . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಕತೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದನು . ಅವನಿಗೆ ಶಾಲಾ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು .

Thursday, September 24, 2015

BAKRID WISHES

ಎಲ್ಲಾ ಮುಸ್ಲಿಮ್ ಬಂಧುಗಳಿಗೂ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು.

SCIENCE QUIZ

ವಿಜ್ಞಾನ ಸಂಘದ ಆಶ್ರಯದಲ್ಲಿ ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಸೆಪ್ಟಂಬರ್ 23 ರಂದು ಜರಗಿತು.
ಪಲಿತಾಂಶ ಈ ರೀತಿ ಇದೆ.
L.P.SECTION:

1. TANUSH KUMAR N. II STD
2. MANOJNA C.H. II STD
2. JOWIN DELROY IV STD
3. VIVEKARAMA P  III STD

U.P.SECTION

1. SATHWIK KRISHNA N. VII C
2. KRITHIKA P VII C

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಿವ್ರತ್ತ ಮುಖ್ಯೋಪಾಧ್ಯಾಯ ಶ್ರೀ ಎನ್. ಎಚ್. ಲಕ್ಷ್ಮೀನಾರಾಯಣ ಭಟ್ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು.
                                            SATHWIK KRISHNA N VII C
                                                   JOWIN DELROY IV STD
                                                        MANOJNA C.H II STD
                                                         TANUSH KUMAR N II STD
                                                               KRITHIKA .P VII C

Maths Seminar Postponed

MANJESHWAR SUB DISTRICT MATHS SEMINAR POSTPONED TO 28.09.2015

Sub Dist Maths Quiz

ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆಯಲ್ಲಿ ಪ್ರಥಮ ಬಹುಮಾನ ಪಡೆದ ನಮ್ಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಸಿಂಜಿತಾ  ಕೆ. ಇವಳು ಮಂಗಲ್ಪಾಡಿ ಯಲ್. ಪಿ. ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ರಾಜಶೇಖರ ಮಾಸ್ಟರ್ ಇವರಿಂದ ಬಹುಮಾನ ಸ್ವೀಕರಿಸುತ್ತಿದ್ದಾಳೆ . ಅವಳಿಗೆ ಶಾಲಾ ಪರವಾಗಿ ಅಭಿನಂದನೆಗಳು . 

 SUB DISTRICT MATHS QUIZ RESULT


HSS Section
First Place: AJAY KUMAR K   (+2)    GHSS PAIVALIKE NAGAR 
Second Place: AHAMMED HASEEB  (+1)  GHSS BEKUR 

 HS SECTION
First Place: ASHAYA K M     ( 10th)        GHSS PAIVALIKE  
Second Place: KHADER ZISHAN ALI  (10th)    SIRAJUL HUDA EMHS UDYAWAR 
   
UP SECTION
First Place:SINJITHA K  (6th)  AUPS DHARMATHADKA 
Second Place: VISHWAJITH K  (6th)   SDPAUPS SAJANKILA

LP SECTION 
First Place: IBRAHIM THOUFEER  (4th ) V.A.U.P.S MEEYAPADAV
Second Place : HABEEB RAHMAN   (4th)     GWLPS MANJESHWAR

Monday, September 21, 2015

Alzheimer's Day -September 21

ಸೆಪ್ಟಂಬರ್ 21 ನ್ನು ಪ್ರತಿವರ್ಷವೂ ಅಲ್ ಝೈಮರ್ ದಿನವಾಗಿ ಆಚರಿಸಲಾಗುತ್ತದೆ . ಆಲ್‌ಝೈಮರ್‌‌ನ ಕಾಯಿಲೆ/ಅಲ್ಜಿಮರ್ (AD ) ಎಂಬುದು ಬುದ್ಧಿಮಾಂದ್ಯತೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದ್ದು, ಇದನ್ನು ಆಲ್‌ಝೈಮರ್‌‌ ಕಾಯಿಲೆ/ಅಲ್ಜಿಮರ್ , ಸಿನೈಲ್‌ ಡಿಮೆನ್ಷಿಯಾ ಆಫ್‌ ದಿ ಆಲ್‌ಝೈಮರ್‌ ಟೈಪ್‌ (SDAT ), ಪ್ರೈಮರಿ ಡೀಜನರೇಟಿವ್‌ ಡಿಮೆನ್ಷಿಯಾ ಆಫ್‌ ದಿ ಆಲ್‌ಝೈಮರ್‌ ಟೈಪ್‌ (PDDAT ), ಅಥವಾ ಆಲ್‌ಝೈಮರ್‌‌ನ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಈ ವಾಸಿ ಮಾಡಲಾಗದ, ಅಂಗಾವನತಿಯ ಮತ್ತು ಮಾರಕ ಕಾಯಿಲೆಯನ್ನು ಅಲೋಯ್ಸ್‌‌ ಆಲ್‌ಝೈಮರ್‌‌ ಎಂಬ ಜರ್ಮನ್‌ ಮನೋವೈದ್ಯ ಮತ್ತು ನರರೋಗಶಾಸ್ತ್ರಜ್ಞನು 1906 ರಲ್ಲಿ ಮೊದಲು ವಿವರಿಸಿದ ಹಾಗೂ ಈ ಕಾಯಿಲೆಗೆ ಅವನ ಹೆಸರನ್ನೇ ಇಡಲಾಯಿತು. ಬಹುತೇಕ ಸಂದರ್ಭಗಳಲ್ಲಿ, 65 ವರ್ಷಗಳಿಗೂ ಹೆಚ್ಚಿನ ವಯಸ್ಸಿನ ಜನರಲ್ಲಿ ಇದರ ರೋಗನಿರ್ಣಯವನ್ನು ಮಾಡಲಾಗುತ್ತದೆಯಾದರೂ, ಕಡಿಮೆ-ಚಾಲ್ತಿಯಲ್ಲಿರುವ ಆರಂಭದ-ಆಕ್ರಮಣದ ಆಲ್‌ಝೈಮರ್‌‌ ಕಾಯಿಲೆಯು ಸಾಕಷ್ಟು ಮುಂಚಿತವಾಗಿಯೇ ಸಂಭವಿಸಬಹುದು. 2006 ರಲ್ಲಿ, ವಿಶ್ವಾದ್ಯಂತ 26.6 millionನಷ್ಟು ಸಂಖ್ಯೆಯ ಜನರು ಈ ಕಾಯಿಲೆಯಿಂದ ನರಳುತ್ತಿದ್ದರು. 2050ರ ವೇಳೆಗೆ ಪ್ರತಿ 85 ಜನರ ಪೈಕಿ ಒಬ್ಬರಿಗೆ ಆಲ್‌ಝೈಮರ್‌‌ ಕಾಯಿಲೆಯು ತಗುಲುತ್ತದೆ ಎಂದು ಊಹಿಸಲಾಗಿದೆ. ಆಲ್‌ಝೈಮರ್‌‌ನ ಕಾಯಿಲೆಯ ಹರಿವು ಪ್ರತಿ ವ್ಯಕ್ತಿಗೂ ಅನನ್ಯ ಸ್ವರೂಪದಲ್ಲಿ ಇರುತ್ತದೆಯಾದರೂ, ಸಾಮಾನ್ಯವಾಗಿರುವ ಅನೇಕ ರೋಗಚಿಹ್ನೆಗಳು ಅಸ್ತಿತ್ವದಲ್ಲಿವೆ. ಇದರ ಅತ್ಯಂತ ಮುಂಚಿನ ದೃಷ್ಟಿಗೋಚರ ರೋಗಚಿಹ್ನೆಗಳು, 'ವಯೋಮಾನ-ಸಂಬಂಧಿತ' ಕಳವಳಗಳು, ಅಥವಾ ಒತ್ತಡದ ಕುರುಹುಗಳು ಎಂಬ ರೀತಿಯಲ್ಲಿ ಅನೇಕವೇಳೆ ತಪ್ಪಾಗಿ ಭಾವಿಸಲ್ಪಡುತ್ತವೆ.ಆರಂಭಿಕ ಹಂತಗಳಲ್ಲಿ, ಹೊಸ ನೆನಪುಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿನ ಅಸಾಮರ್ಥ್ಯವು ಅತ್ಯಂತ ಸಾಮಾನ್ಯವಾಗಿ ಗುರುತಿಸಲ್ಪಟ್ಟ ರೋಗಚಿಹ್ನೆಯಾಗಿರುತ್ತದೆ; ಇತ್ತೀಚೆಗಷ್ಟೇ ವೀಕ್ಷಿಸಿದ ವಾಸ್ತವಾಂಶಗಳನ್ನು ನೆನಪಿಸಿಕೊಳ್ಳುವಲ್ಲಿನ ತೊಡಕು ಇದಕ್ಕೊಂದು ನಿದರ್ಶನ. AD ಸಮಸ್ಯೆ ಯಿರುವುದರ ಕುರಿತು ಶಂಕೆ ಮೂಡಿದಾಗ, ನಡವಳಿಕೆಯ ನಿರ್ಧಾರಣೆಗಳು ಮತ್ತು ಜ್ಞಾನಗ್ರಹಣದ ಪರೀಕ್ಷೆಗಳ ನೆರವಿನಿಂದ ರೋಗನಿರ್ಣಯವು ಸಾಮಾನ್ಯವಾಗಿ ದೃಢೀಕರಿಸಲ್ಪಡುತ್ತದೆ; ಒಂದು ವೇಳೆ ಲಭ್ಯವಾದಲ್ಲಿ, ಇದರ ನಂತರ ಒಂದು ಮಿದುಳಿನ ಪ್ರತಿಬಿಂಬದ ಅವಲೋಕನವನ್ನೂ ಅನೇಕ ವೇಳೆ ಕೈಗೊಳ್ಳಲಾಗುತ್ತದೆ. ಕಾಯಿಲೆಯು ಮುಂದುವರಿದಂತೆ ರೋಗಚಿಹ್ನೆಗಳಲ್ಲಿ ಇವೆಲ್ಲವೂ ಸೇರಿಕೊಳ್ಳುತ್ತವೆ: ದಿಗ್ಭ್ರಾಂತಿ, ಮುಂಗೋಪ ಮತ್ತು ಆಕ್ರಮಣಶೀಲತೆ, ಚಿತ್ತಸ್ಥಿತಿಯ ತೂಗಾಟಗಳು, ಭಾಷೆಯು ಇದ್ದಕ್ಕಿದ್ದಂತೆ ನಿಂತು ಹೋಗುವುದು, ದೀರ್ಘಾವಧಿಯ ಸ್ಮೃತಿಯ ನಷ್ಟ. ಇಷ್ಟೇ ಅಲ್ಲ, ನರಳುವವರ ಇಂದ್ರಿಯ ಗಳು ಕ್ಷೀಣಿಸುವುರಿಂದ ಅವರಲ್ಲಿ ಸಾಮಾನ್ಯ ನಿವರ್ತನವು ಕಂಡು ಬರುತ್ತದೆ. ಕ್ರಮೇಣವಾಗಿ, ಶಾರೀರಿಕ ಕಾರ್ಯಚಟುವಟಿಕೆಗಳು ನಷ್ಟವಾಗಿ ಅದು ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ. ಕಾಯಿಲೆಯ ಅವಧಿಯು ಬದಲಾಗುತ್ತಾ ಹೋಗುವುದರಿಂದ, ಪ್ರತ್ಯೇಕವಾದ ಮುನ್ನರಿವನ್ನು ನಿರ್ಧಾರಣೆ ಮಾಡುವುದು ಕಷ್ಟಕರವಾಗಿರುತ್ತದೆ. AD ಸಮಸ್ಯೆಯು ಸಂಪೂರ್ಣ ಸ್ಪಷ್ಟವಾಗಿ ಗೋಚರಿಸುವವರೆಗೆ ಒಂದು ಅನಿರ್ಧಾರಿತ ಕಾಲಾವಧಿಯವರೆಗೆ ಬೆಳೆಯುತ್ತದೆ, ಮತ್ತು ಅನೇಕ ವರ್ಷಗಳ ವರೆಗೆ ಇದು ಕಂಡು ಹಿಡಿಯಲ್ಪಡದೆಯೇ ಮುಂದುವರಿಯಬಲ್ಲದು. ರೋಗನಿರ್ಣಯವನ್ನು ಅನುಸರಿಸಿಕೊಂಡು ಬರುವ ಸರಾಸರಿ ಜೀವನ ನಿರೀಕ್ಷಣೆಯು ಸರಿಸುಮಾರಾಗಿ ಏಳು ವರ್ಷಗಳಷ್ಟಿರುತ್ತದೆ. ಮೂರು ಪ್ರತಿಶತಕ್ಕಿಂತಲೂ ಕಡಿಮೆ ಭಾಗದ ವ್ಯಕ್ತಿಗಳು, ರೋಗನಿರ್ಣಯವಾದ ನಂತರ ಹದಿನಾಲ್ಕು ವರ್ಷಗಳಿಗೂ ಹೆಚ್ಚಿನ ಅವಧಿಯವರೆಗೆ ಬದುಕುತ್ತಾರೆ.ಆಲ್‌ಝೈಮರ್‌‌ನ ಕಾಯಿಲೆಯ ಕಾರಣ ಮತ್ತು ಮುನ್ನಡೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗಿಲ್ಲ. ಮಿದುಳಿನಲ್ಲಿ ಕಂಡುಬರುವ ದದ್ದುಗಳು ಮತ್ತು ಗೋಜಲುಗಳೊಂದಿಗೆ ಕಾಯಿಲೆಯು ಸಂಬಂಧವನ್ನು ಹೊಂದಿದೆ ಎಂಬುದಾಗಿ ಸಂಶೋಧನೆಯು ಸೂಚಿಸುತ್ತದೆ.ಪ್ರಸಕ್ತವಾಗಿ ಬಳಸಲಾಗುತ್ತಿರುವ ಚಿಕಿತ್ಸೆಗಳು ಒಂದು ಸಣ್ಣ ಪ್ರಮಾಣದಲ್ಲಿ ರೋಗಲಕ್ಷಣದ ಪ್ರಯೋಜನವನ್ನು ನೀಡುತ್ತವೆ; ಕಾಯಿಲೆಯ ಮುನ್ನಡೆಯನ್ನು ವಿಳಂಬಗೊಳಿಸುವ ಅಥವಾ ನಿಲ್ಲಿಸುವ ಯಾವುದೇ ಚಿಕಿತ್ಸೆಗಳು ಇನ್ನೂ ಲಭ್ಯವಾಗಿಲ್ಲ. As of 2008, AD ಸಮಸ್ಯೆಯ ಕುರಿತಾದ ಒಂದು ಸಂಭಾವ್ಯ ಚಿಕಿತ್ಸೆಯನ್ನು ಗುರುತಿಸುವುದಕ್ಕೆ ಸಂಬಂಧಿಸಿದಂತೆ 500ಕ್ಕೂ ಹೆಚ್ಚಿನ ವಸ್ತುನಿಷ್ಠ ಪರೀಕ್ಷೆಗಳನ್ನು ನಡೆಸಲಾಗಿದೆಯಾದರೂ, ಪ್ರಾಯೋಗಿಕ ಪರೀಕ್ಷೆಗೊಳಪಡಿಸಲ್ಪಟ್ಟ ಈ ಮಧ್ಯಸ್ಥಿಕೆಯ ಕಾರ್ಯತಂತ್ರಗಳ ಪೈಕಿ ಯಾವುದಾದರೂ ಒಂದು ಆಶಾ ದಾಯಕ ಫಲಿತಾಂಶಗಳನ್ನು ತೋರಿಸಲಿದೆಯೇ ಇಲ್ಲವೇ ಎಂಬುದು ಇನ್ನೂ ತಿಳಿದು ಬಂದಿಲ್ಲ.ಆಲ್‌ಝೈಮರ್‌‌ನ ಕಾಯಿಲೆಯ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಹಲವಾರು ಆಕ್ರಮಣಶೀಲವಲ್ಲದ, ಜೀವನ-ಶೈಲಿಯ ಅಭ್ಯಾಸಗಳು ಸೂಚಿಸಲ್ಪಟ್ಟಿವೆಯಾದರೂ, ಈ ಶಿಫಾರಸುಗಳು ಮತ್ತು ತಗ್ಗಿಸಲ್ಪಟ್ಟ ಅಂಗಾವನತಿಯ ನಡುವಿನ ಒಂದು ಸಂಬಂಧದ ಕುರಿತಾದ ಸಮರ್ಪಕವಾದ ಪುರಾವೆ ಯ ಕೊರತೆಯೊಂದು ಎದ್ದು ಕಾಣುತ್ತಿದೆ. ಕಾಯಿಲೆಯನ್ನು ನಿಭಾಯಿಸುವುದರ ಒಂದು ಕಾರ್ಯಸಾಧ್ಯವಾದ ಮಾರ್ಗವಾಗಿ ಹಾಗೂ ತಡೆಗಟ್ಟುವಿಕೆಯ ಒಂದು ಸಂಭಾವ್ಯ ವಿಧಾನವಾಗಿ ಹೀಗೆ ಎರಡೂ ರೀತಿಗಳಲ್ಲೂ ಮಾನಸಿಕ ಉತ್ತೇಜನ, ವ್ಯಾಯಾಮ, ಮತ್ತು ಒಂದು ಸಮತೋಲಿತ ಆಹಾರ ಇವುಗಳನ್ನು ಈ ಸಂದರ್ಭದಲ್ಲಿ ಸೂಚಿಸಲಾಗಿದೆ. AD ಸಮಸ್ಯೆಯನ್ನು ವಾಸಿಮಾಡುವುದು ಸಾಧ್ಯವಿಲ್ಲದಿರುವುದರಿಂದ ಮತ್ತು ಇದು ಅವನತಿಶೀಲವಾಗಿರುವುದರಿಂದ, ರೋಗಿಗಳನ್ನು ನಿಭಾಯಿಸುವುದು ಅತ್ಯಾವಶ್ಯಕ. ಪಾಲನೆ-ಮಾಡುವ ಮುಖ್ಯ ಪಾತ್ರವನ್ನು ರೋಗಿಯ ಜೀವನಸಂಗಾತಿ ಅಥವಾ ಓರ್ವ ಹತ್ತಿರದ ಸಂಬಂಧಿಕ ಬಹುಪಾಲು ವಹಿಸಿ ಕೊಳ್ಳುತ್ತಾರೆ. ಪಾಲನೆ-ಮಾಡುವವರ ಮೇಲೆ ಒಂದು ಮಹತ್ತರವಾದ ಹೊರೆಯನ್ನು ಇರಿಸುವುದಕ್ಕೆ ಸಂಬಂಧಿಸಿದಂತೆ ಆಲ್‌ಝೈಮರ್‌‌ನ ಕಾಯಿಲೆಯು ಸುಪರಿಚಿತವಾಗಿದೆ; ಪಾಲನೆ-ಮಾಡುವವರ ಸಾಮಾಜಿಕ, ಮಾನಸಿಕ, ಶಾರೀರಿಕ, ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡಂತೆ ಒತ್ತಡಗಳು ವ್ಯಾಪಕ-ಶ್ರೇಣಿಯಲ್ಲಿರಲು ಸಾಧ್ಯವಿದೆ. ಅಭಿವೃದ್ಧಿಹೊಂದಿದ ದೇಶಗಳಲ್ಲಿ, AD ಸಮಸ್ಯೆಯು ಸಮಾಜಕ್ಕೆ ಒದಗಿರುವ ಅತ್ಯಂತ ದುಬಾರಿ ಕಾಯಿಲೆಗಳ ಪೈಕಿ ಒಂದೆನಿಸಿದೆ.
Source: Wikipedia

2014-15 Minority Pre Matric Scholarship Edit Bank Account

2014 -15 ರ Minority Pre Matric Scholarship ನ ಮಕ್ಕಳ  Bank Account  Number ನ್ನು 17.9.2015 ರಿಂದ 30.9.2015 ರ ತನಕ ಆ ಸೈಟಿನಲ್ಲಿ EDIT ಮಾಡಲು ಸೌಕರ್ಯ ಮಾಡಲಾಗಿದೆ.

MATHS SEMINAR

ಸೆಪ್ಟಂಬರ್ 25 ರಂದು ನಡೆಯಬೇಕಾಗಿದ್ದ ಗಣಿತ ಸೆಮಿನಾರನ್ನು ಸೆಪ್ಟಂಬರ್ 26 ಕ್ಕೆ  ಮುಂದೂಡಲಾಗಿದೆ ಎಂದು Assistant Educational Officer, Manjeshwar ತಿಳಿಸಿದ್ದಾರೆ.

BAKRID HOLIDAY

G.O.(P)NO.6998/2015 DT:19.9.2015 ರ ಆದೇಶದ ಪ್ರಕಾರ ಕೇರಳದ ಪ್ರೊಫೆಶನಲ್ ಕಾಲೇಜು ಸಹಿತ ಎಲ್ಲಾ ವಿದ್ಯಾಭ್ಯಾಸ ಸಂಸ್ಥೆ ಗಳಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ಅಕ್ಟೋಬರ್ 25 ರಂದು ರಜೆಯಾಗಿರುತ್ತದೆ.

SIXTH WORKING DAY STATEMENT 2015 - INSTRUCTIONS

1. Sampoorna  ದ Username ಮತ್ತು Password ಬಳಸಿ Login ಆಗಿರಿ. . 
2. 6th working day ಯಲ್ಲಿರುವ classwise strength ನ ಆಧಾರದಲ್ಲಿ classwise print ಎಂಬ ಮೆನುವಿನಲ್ಲಿ ಕ್ಲಿಕ್ ಮಾಡಿ ಕ್ಲಾಸ್ ಮತ್ತು ಡಿವಿಶನ್ ಸೆಲೆಕ್ಟ್ ಮಾಡಿ ಪ್ರಿಂಟ್ ತೆಗೆಯಬಹುದು. 
3. ಮಕ್ಕಳ ಸಂಖ್ಯೆಯು 6th workingday ಸಂಖ್ಯೆಗಿಂತ ಹೆಚ್ಚಿದ್ದರೆ printout view ನಲ್ಲಿ remove button ಉಪಯೋಗಿಸಿ ತಾತ್ಕಾಲಿಕವಾಗಿ ಮಕ್ಕಳನ್ನು delete ಮಾಡಬಹುದು. 
4. ತಾತ್ಕಾಲಿಕವಾಗಿ delete ಮಾಡಿದ ಮಕ್ಕಳನ್ನು ಪುನಃ ಸೇರಿಸಲು reset student ಎಂಬ link click ಮಾಡಬೇಕು. 
5. Print View ನಲ್ಲಿ ಮಕ್ಕಳ ಸಂಖ್ಯೆಯು 6th workingday strength ಗಿಂತ ಕಡಿಮೆಯಿದ್ದರೆ printout ತೆಗೆದು ಕೊನೆಯಲ್ಲಿ 6th workingday ಯ ಬಳಿಕ T.C ಕೊಟ್ಟ ಮಕ್ಕಳ ವಿವರಗಳನ್ನು ಬರೆದು ಸೇರಿಸಬೇಕು. 
6. UID ಇಲ್ಲದವರು Entry form EID ಎಂಬ ಲಿಂಕಿನಲ್ಲಿ ಕ್ಲಿಕ್ ಮಾಡಿ EID ಸೇರಿಸಬೇಕು. 
7. Sampoorna ದಲ್ಲಿ UID ಇಲ್ಲದ ಮಕ್ಕಳ UID, Entry Form EID/UID link click ಮಾಡಿ ಸೇರಿಸಬಹುದು.
6th working day WEBSITE.
Contact Address
Email: sixthworkday@gmail.com

DPI Office:0471-2580515
IT@School Project:0471- 2529800 
UID/EID ವಿವರಗಳನ್ನು ಅಕ್ಟೋಬರ್ 15 ರ ಮೊದಲು update ಮಾಡಬೇಕು

Wednesday, September 16, 2015

2015 -16 ACTIVITIES

ಈ ವರ್ಷದ ವಿವಿಧ ಮೇಳಗಳು ಈ ಕೆಳಗಿನ ಶಾಲೆಗಳಲ್ಲಿ ನಡೆಯಲಿದೆ.
೧. ಸಮಾಜ, ವಿಜ್ಞಾನ, ಗಣಿತ ವ್ರತ್ತಿಪರಿಚಯ ಐ.ಟಿ. ಮೇಳ- GVHSS KUNJATHUR
೨. ಆಟೋಟ ಸ್ಪರ್ಧೆಗಳು - ಮಣ್ಣ ೦ಗುಳಿ ಮೈದಾನ ಉಪ್ಪಳ
೩. ಶಾಲಾ ಕಲೋತ್ಸವ - GHSS BEKUR

HINDI SAHITYOTSAV

  ಕವಿತಾಲಾಪನೆಯಲ್ಲಿ ಪ್ರಥಮ ಬಹುಮಾನವನ್ನು ಸ್ವೀಕರಿಸುತ್ತಿರುವ ಶಾರದಾ ಸುರಭಿ 
               ಹಿಂದಿ ಪೋಸ್ಟರ್ ಸ್ಪರ್ಧೆಯಲ್ಲಿ ಮೂಡಿ ಬಂದ ಪೋಸ್ಟರ್ ಗಳು 

ಇಂದು ಉದ್ಯಾವರ ಹೈಸ್ಕೂಲಿನಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಹಿಂದಿ ಸಾಹಿತ್ಯೋತ್ಸವ ನಡೆಯಿತು. ಅದರಲ್ಲಿ ನಮ್ಮ ಶಾಲೆಯ ಶಾರದಾ ಸುರಭಿ ಕವಿತಾಲಾಪನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ . ಓದುವ  ಸರ್ಧೆಯಲ್ಲಿ ಸಾತ್ವಿಕ್ ಕ್ರಷ್ಣ ಮೂರನೆ ಸ್ಥಾನ ಪಡೆದಿದ್ದಾನೆ.

HINDI DIVAS

ನಮ್ಮ ಶಾಲೆಯಲ್ಲಿ ಹಿಂದಿ ದಿವಸ್ ಆಚರಿಸಲಾಯಿತು. ಶಾಲಾ ನಾಯಕನು ಹಿಂದಿ ಭಾಷೆಯ  ಮಹತ್ವದ ಕುರಿತು ಮಾತನಾಡಿದನು. ಮಕ್ಕಳಿಗೆ ಹಿಂದಿ ಬರಹ, ಓದುವಿಕೆ ಪೋಸ್ಟರ್ ರಚನೆ ಮೊದಲಾದ ಸ್ಪರ್ಧೆಗಳನ್ನು ನಡೆಸಿ ಬಹುಮಾನ  ವಿತರಿಸಲಾಯಿತು.

Saturday, September 12, 2015

MATHS SEMINAR

RAMANUJAN MEMORIAL PAPER PRESENTATION AND BHASKARACHARYA SEMINAR

RAMANUJAN MEMORIAL PAPER PRESENTATION - HS Section Only 

   TOPIC - CIRCLES AND STRIGHT LINES

                     BHASKARACHARYA SEMINAR TOPIC 

             UP Section - FRACTIONS

  HS Section - PROPORTIONS IN GEOMETRY

                     Date and time  -  25-09-2015 Friday  10 am
                            Venue        -  BRC Manjeshwara

Friday, September 4, 2015

Prime Minister Interaction with Children




ಭಾರತದ ಮಾಜಿ ರಾಷ್ಟ್ರಪತಿ ಡಾ । ಎಸ್. ರಾಧಾಕ್ರಷ್ಣನ್ ಅವರ ಜನ್ಮ ದಿನವಾದ ಸೆಪ್ಟಂಬರ್ 5 ನ್ನು ಅಧ್ಯಾಪಕ ದಿನವಾಗಿ ಆಚರಿಸಲಾಗುತ್ತದೆ. ಅದರ ಭಾಗವಾಗಿ ಇಂದು ನಮ್ಮ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಅದರ ನೇರ ಪ್ರಸಾರವನ್ನು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ತೋರಿಸಲಾಯಿತು.

NAMMA MANE


ಎರಡನೆ ತರಗತಿಯ ಮಕ್ಕಳು ನಮ್ಮ ಮನೆ ಪಾಠಕ್ಕೆ ಸಂಬಂಧಿಸಿ ತಯಾರಿಸಿದ ಮನೆಗಳು

Wednesday, September 2, 2015

World Coconut Day

ಇಂದು ( ಸೆಪ್ಟಂಬರ್ 2)ವಿಶ್ವ  ನಾರಿಕೇಳ (ತೆಂಗು) ದಿನ :

ಪ್ರಪಂಚದಲ್ಲಿ  ಸುಮಾರು  ತೊಂಬತ್ತಕ್ಕಿಂತಲೂ ಹೆಚ್ಚು ದೇಶಗಳಲ್ಲಿ  ತೆಂಗನ್ನು  ಬೆಳೆಸುತ್ತಾರೆ.  ಆದರೆ ತೆಂಗಿನ ಹೆಸರು ಹೊಂದಿರುವ ರಾಜ್ಯವು ಕೇರಳವಾಗಿದೆ. ಕೇರ ವ್ರಕ್ಷಗಳ ನಾಡು  ಕೇರಳವಾಗಿದೆ. ತೆಂಗಿನ ಮರವು ಸಾಮಾನ್ಯವಾಗಿ ಕರಾವಳಿ ತೀರಗಳಲ್ಲಿ  ಬೆಳೆಯುತ್ತವೆ. ತೆಂಗಿನ ಮರದ ಪ್ರತಿಯೊಂದು ಭಾಗವು  ಪ್ರಯೋಜನಕಾರಿಯಾದ  ಕಾರಣ   ಅದನ್ನು ಕಲ್ಪವ್ರಕ್ಷ ಎಂದು ಕರೆಯುತ್ತಾರೆ. ತೆಂಗನ್ನು  ತಮಿಳಿನಲ್ಲಿ ತೆನ್ನೈ , ಮಲಯಾಳದಲ್ಲಿ  ತೆಂಗ್ , ತೆಲುಗಿನಲ್ಲಿ ತೆಂಗಾಯ , ಹಿಂದಿಯಲ್ಲಿ ನಾರಿಯಲ್ ಎಂದು ಕರೆಯುತ್ತಾರೆ. ಇದರ  ವೈಜ್ಞಾನಿಕ ಹೆಸರು ಕೊಕೋಸ್ ನ್ಯುಸಿಫೆರ . ತೆಂಗಿನ ಮರವು ನಮ್ಮ ರಾಜ್ಯದ ವ್ರಕ್ಷವಾಗಿದೆ.
 ಇಂಡೋನೀಶ್ಯದ ಜಕಾರ್ತ ಆಸ್ಥಾನವಾಗಿರುವ ಏಶ್ಯನ್  ಏಂಡ್ ಫೆಸಿಫಿಕ್ ಕೋಕನಟ್ ಕಮ್ಮ್ಯುನಿಟಿ (APCC) ಎಂಬ ಅಂತಾರಾಷ್ಟ್ರೀಯ  ಸಂಸ್ಥೆ ಯು ವಿಶ್ವ ನಾರಿಕೇಳ ದಿನಾಚರಣೆಯನ್ನು ಹುಟ್ಟುಹಾಕಿತು. ಈ ಸಂಸ್ಥೆಯು  ಯುಕ್ತ ರಾಷ್ಟ್ರ ಸಂಘದ ಏಶ್ಯಾ ಫೆಸಿಫಿಕ್ ಅಭಿವ್ರದ್ಧಿಯ ಸಂರಕ್ಷಣೆಯಲ್ಲಿದೆ . 2009 ಸೆಪ್ಟಂಬರ್ 2 ರಿಂದ ವಿಶ್ವ ನಾರಿಕೇಳ ದಿನವನ್ನು ಆಚರಿಸಲು ಪ್ರಾರಂಭಿಸಿದರು . ತೆಂಗಿನ ಪ್ರಾಧಾನ್ಯತೆಯ ಬಗ್ಗೆ ತಿಳುವಳಿಕೆ ಮೂಡಿಸುವುದು, ತೆಂಗಿನ ಕೈಗಾರಿಕೆ ಮತ್ತು ಉತ್ಪನ್ನಗಳ ಪ್ರಚಾರ ಹಾಗೂ ಪ್ರೋತ್ಸಾಹಿಸುವುದು , ಮಾನವನ ಜೀವನದ ವಿಕಾಸದಲ್ಲಿ ತೆಂಗಿನೊಂದಿಗಿರುವ ಸಂಬಂಧದ ಕುರಿತು ತಿಳಿಯುವುದು ಮೊದಲಾದುವುಗಳು  ವಿಶ್ವ ನಾರಿಕೇಳ ದಿನಾಚರಣೆಯ ಉದ್ದೇಶಗಳಾಗಿವೆ.

Pre Matric Scholarship

Pre Matric Scholarship 2015 -16 Last date for Online submission of application is  10.9.2015