MANJESHWAR SUB DIST.SHASTROTHSAVAM 2016-17 RESULT CLICK HERE
FLASH NEWS
NUDIMUTHU
Monday, October 24, 2016
Friday, October 21, 2016
SCHOOL KALOTHSAVAM 2016
ಶಾಲಾ ಕಲೋತ್ಸವ
ಈ ವರ್ಷದ ನಮ್ಮ ಶಾಲಾ ಮಟ್ಟದ ಕಲೋತ್ಸವವು ಅಕ್ಟೊಬರ್ 18 ಮತ್ತು 19 ರಂದು ಜರಗಿತು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಅವರು ದೀಪ ಬೆಳಗಿಸಿ ಉತ್ಸವವನ್ನು ಉದ್ಘಾಟಿಸಿದರು. ಶಾಲಾ ಪಿ. ಟಿ. ಎ. ಅಧ್ಯಕ್ಷ ಜಾನ್ ಡಿ ಸೋಜ ಅಧ್ಯಕ್ಷತೆ ವಹಿಸಿದರು. ಮಕ್ಕಳಿಗೆ ಶಾಸ್ತ್ರೀಯ ಸಂಗೀತ, ಲಘು ಸಂಗೀತ , ಕಂಠಪಾಠ , ಏಕಪಾತ್ರಾಭಿನಯ , ಭಾಷಣ , ಕಥಾಪ್ರಸಂಗ , ಮಾಪಿಳ್ಳಾಪಾಟ್ಟು , ಒಪ್ಪನ , ಜಾನಪದ ನ್ರತ್ಯ , ಸಮೂಹ ನ್ರತ್ಯ, ದೇಶಭಕ್ತಿಗೀತೆ, ಸಮೂಹಗೀತೆ, ನಾಟಕ ಮೊದಲಾದ ವಿಷಯಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಈ ವರ್ಷದ ನಮ್ಮ ಶಾಲಾ ಮಟ್ಟದ ಕಲೋತ್ಸವವು ಅಕ್ಟೊಬರ್ 18 ಮತ್ತು 19 ರಂದು ಜರಗಿತು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಅವರು ದೀಪ ಬೆಳಗಿಸಿ ಉತ್ಸವವನ್ನು ಉದ್ಘಾಟಿಸಿದರು. ಶಾಲಾ ಪಿ. ಟಿ. ಎ. ಅಧ್ಯಕ್ಷ ಜಾನ್ ಡಿ ಸೋಜ ಅಧ್ಯಕ್ಷತೆ ವಹಿಸಿದರು. ಮಕ್ಕಳಿಗೆ ಶಾಸ್ತ್ರೀಯ ಸಂಗೀತ, ಲಘು ಸಂಗೀತ , ಕಂಠಪಾಠ , ಏಕಪಾತ್ರಾಭಿನಯ , ಭಾಷಣ , ಕಥಾಪ್ರಸಂಗ , ಮಾಪಿಳ್ಳಾಪಾಟ್ಟು , ಒಪ್ಪನ , ಜಾನಪದ ನ್ರತ್ಯ , ಸಮೂಹ ನ್ರತ್ಯ, ದೇಶಭಕ್ತಿಗೀತೆ, ಸಮೂಹಗೀತೆ, ನಾಟಕ ಮೊದಲಾದ ವಿಷಯಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
Monday, October 17, 2016
MATHS QUIZ WINNER
ಜಿ. ಬಿ. ಎಲ್. ಪಿ. ಶಾಲೆ ಮಂಗಲ್ಪಾಡಿಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಯು.ಪಿ. ವಿಭಾಗದ ಗಣಿತ ರಸಪ್ರಶ್ನೆ ಹಾಗೂ ಗಣಿತ ಸೆಮಿನಾರಿನಲ್ಲಿ ನಮ್ಮ ಶಾಲೆಯ ಏಳನೇ ತರಗತಿಯ ಸಿಂಜಿತಾ ನೆಕ್ಕಿಗುಳಿ ದ್ವಿತೀಯ ಬಹುಮಾನವನ್ನು ಗಳಿಸಿರುತ್ತಾಳೆ. ಅವಳಿಗೆ ಶಾಲಾ ಪರವಾಗಿ ಅಭಿನಂದನೆಗಳು. ಮಂಗಲ್ಪಾಡಿ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಶೇಖರ್ ಮಾಸ್ಟರ್ ಅವಳಿಗೆ ಬಹುಮಾನವನ್ನು ನೀಡಿದರು. ಅದನ್ನು ಶಾಲಾ ಅಸೆ೦ಬಿಲಿ ಯಲ್ಲಿ ನಮ್ಮ ಶಾಲಾ ಮುಖ್ಯೋಪಾಧ್ಯಾಯರು ವಿತರಿಸಿದರು.
Tuesday, October 11, 2016
NAVARATHRI FESTIVAL
ಶಾರದಾ ಪೂಜೆ
ನವರಾತ್ರಿ ಹಬ್ಬದ ಭಾಗವಾಗಿ ನಮ್ಮ ಶಾಲೆಯಲ್ಲಿ ಪುಸ್ತಕ ಪೂಜೆ ಹಾಗು ವಿದ್ಯಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. ಎಲ್ಲಾ ತರಗತಿಯ ಮಾಕಾಳ ಪುಸ್ತಕಗಳನ್ನು ಶಾರದಾ ದೇವಿಯ ಭಾವಚಿತ್ರದ ಮುಂಭಾಗದಲ್ಲಿಟ್ಟು ಪೂಜಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಶ್ರೀ ಶಿವಪ್ರಸಾದ್ ನೆರಿಯ ಅವರು ಪೂಜೆಯನ್ನು ನೆರವೇರಿಸಿಕೊಟ್ಟರು. ಪೂಜೆಯ ಮೊದಲು ಅಧ್ಯಾಪಕರೂ ಮಕ್ಕಳೂ ಸೇರಿ ದೇವಿಯ ಭಜನೆ ಹಾಡಿದರು . ಪೂಜೆಯ ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಅಕ್ಷರಾಭ್ಯಾಸ ಮಾಡಿಸಿದರು. ಬಳಿಕ ಎಲ್ಲಾ ಮಕ್ಕಳು ಪುಸ್ತಕ ಓದಿದರು . ಶಾಲಾ ಅಧ್ಯಾಪಕ ಶ್ರೀ ರಾಮಮೋಹನ ಮಾಸ್ಟರ್ ನವರಾತ್ರಿ ಹಬ್ಬದ ಮಹತ್ವದ ಕುರಿತು ಮಕ್ಕಳಿಗೆ ತಿಳಿಸಿದರು. ಎಲ್ಲ ಮಕ್ಕಳಿಗೂ ಪ್ರಸಾದವನ್ನು ವಿತರಿಸಲಾಯಿತು .
ಹುಲಿವೇಷ ಕುಣಿತ
ನವರಾತ್ರಿ ಹಬ್ಬದ ಭಾಗವಾಗಿ ನಮ್ಮ ಶಾಲೆಯಲ್ಲಿ ಪುಸ್ತಕ ಪೂಜೆ ಹಾಗು ವಿದ್ಯಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. ಎಲ್ಲಾ ತರಗತಿಯ ಮಾಕಾಳ ಪುಸ್ತಕಗಳನ್ನು ಶಾರದಾ ದೇವಿಯ ಭಾವಚಿತ್ರದ ಮುಂಭಾಗದಲ್ಲಿಟ್ಟು ಪೂಜಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಶ್ರೀ ಶಿವಪ್ರಸಾದ್ ನೆರಿಯ ಅವರು ಪೂಜೆಯನ್ನು ನೆರವೇರಿಸಿಕೊಟ್ಟರು. ಪೂಜೆಯ ಮೊದಲು ಅಧ್ಯಾಪಕರೂ ಮಕ್ಕಳೂ ಸೇರಿ ದೇವಿಯ ಭಜನೆ ಹಾಡಿದರು . ಪೂಜೆಯ ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಅಕ್ಷರಾಭ್ಯಾಸ ಮಾಡಿಸಿದರು. ಬಳಿಕ ಎಲ್ಲಾ ಮಕ್ಕಳು ಪುಸ್ತಕ ಓದಿದರು . ಶಾಲಾ ಅಧ್ಯಾಪಕ ಶ್ರೀ ರಾಮಮೋಹನ ಮಾಸ್ಟರ್ ನವರಾತ್ರಿ ಹಬ್ಬದ ಮಹತ್ವದ ಕುರಿತು ಮಕ್ಕಳಿಗೆ ತಿಳಿಸಿದರು. ಎಲ್ಲ ಮಕ್ಕಳಿಗೂ ಪ್ರಸಾದವನ್ನು ವಿತರಿಸಲಾಯಿತು .
ಹುಲಿವೇಷ ಕುಣಿತ
Wednesday, October 5, 2016
Organising Committee Formation
2016-17 ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಂಸ್ಕ್ರತೋತ್ಸವ ಹಾಗು ಅರೇಬಿಕ್ ಸಾಹಿತ್ಯೋತ್ಸವದ ಓರ್ಗನೈಸಿಂಗ್ ಸಮಿತಿ ಹಾಗು ವಿವಿಧ ಉಪ ಸಮಿತಿಗಳ ರೂಪಿಕರಣದ ಸಭೆಯು ದಿನಾಂಕ 05-10-2016 ನೇ ಬುಧವಾರ ಅಪರಾಹ್ನ 2.30 ಕ್ಕೆ ಸರಿಯಾಗಿ ಆರಂಭವಾಯಿತು. ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಅರುಣಾ ಜೆ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತಿಗೆ ಪಂಚಾಯತ್ ವೆಲ್ಫೇರ್ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಚನಿಯ ಪಾಡಿ ಸಭೆಯ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಪಿ. ಟಿ. ಎ . ಅಧ್ಯಕ್ಷ ಸುಂದರ ಶೆಟ್ಟಿ , ಎ. ಯು.ಪಿ.ಶಾಲೆ ಧರ್ಮತ್ತಡ್ಕದ ಪಿ.ಟಿ. ಎ. ಅಧ್ಯಕ್ಷ ಶ್ರೀ ಜಾನ್ ಡಿ ಸೋಜ , ಮಂಜೇಶ್ವರ ಉಪಜಿಲ್ಲಾ ಮುಖ್ಯೋಪಾಧ್ಯಾಯ ಫೋರಮ್ ಕಾರ್ಯದರ್ಶಿ ಶ್ರೀ ಟಿ.ಡಿ. ಸದಾಶಿವ ರಾವ್ , ದುರ್ಗಾಪರಮೇಶ್ವರಿ ಹೈಸ್ಕೂಲಿನ ಮೆನೇಜರ್ ಶಂಕರನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಪುತ್ತಿಗೆ ಪಂಚಾಯತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶಾಂತಿ , ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ವಸಂತಿ , ಧರ್ಮತ್ತಡ್ಕ ಯು.ಪಿ. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಚಳ್ಳಂಗಾಯಮ್ ಶಾಲಾ ಮೆನೇಜರ್ ಶ್ರೀ ಸಿ. ಎ .ಅಬ್ದುಲ್ಲಾ ಉಪಸ್ಥಿತರಿದ್ದರು. ಸಭೆಯಲ್ಲಿ ಕಲೋತ್ಸವದ ಜನರಲ್ ಕನ್ವಿನರ್ ಆಗಿ SDPHSS Dharmathadka ದ Pricipal ಶ್ರೀ ರಾಮಚಂದ್ರ ಭಟ್ ಹಾಗು ಧರ್ಮತ್ತಡ್ಕ ಯು.ಪಿ. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯನ್ .ಮಹಾಲಿಂಗ ಭಟ್ ಅವರನ್ನು ಜಾಯಿಂಟ್ ಕನ್ವಿನರ್ ಆಗಿ ಆರಿಸಲಾಯಿತು. ನವೆಂಬರ್ ತಿಂಗಳಿನ 26,28,29 ಮತ್ತು 30 ರಂದು ಉಪಜಿಲ್ಲಾ ಕಲೋತ್ಸವವನ್ನು ನಡೆಸುವುದೆಂದು ನಿಶ್ಚಯಿಸಲಾಯಿತು. ಕಲೋತ್ಸವದ ಯಶಸ್ಸಿಗಾಗಿ ಸಂಘಾಟಕ ಸಮಿತಿ ಹಾಗು ವಿವಿಧ ಉಪ ಸಮಿತಿಗಳನ್ನು ರೂಪೀಕರಿಸಲಾಯಿತು. ಕಲೋತ್ಸವದ ಜನರಲ್ ಕನ್ವಿನರ್ ಶ್ರೀ ರಾಮಚಂದ್ರ ಭಟ್ ಸ್ವಾಗತಿಸಿದರು. ಜಾಯಿಂಟ್ ಕನ್ವಿನರ್ ಯನ್ . ಮಹಾಲಿಂಗ ಭಟ್ ವಂದಿಸಿದರು. ಧರ್ಮತ್ತಡ್ಕ ಹೈಸ್ಕೂಲಿನ ಅಧ್ಯಾಪಕ ಸತೀಶ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Tuesday, October 4, 2016
Sunday, October 2, 2016
ORGANISING COMMITTE FORMATION MEETING
ಈ ವರ್ಷದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ, ಸಂಸ್ಕ್ರತೋತ್ಸವ ಹಾಗೂ ಅರೇಬಿಕ್ ಸಾಹಿತ್ಯೋತ್ಸವವು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಎ. ಯು.ಪಿ. ಶಾಲೆ ಧರ್ಮತ್ತಡ್ಕದಲ್ಲಿ ಜರಗಲಿರುವುದು. ಇದರ ಓರ್ಗನೈಸಿಂಗ್ ಕಮಿಟಿ ರೂಪೀಕರಣ ಸಭೆಯು ದಿನಾಂಕ 05-10-2016 ನೇ ಬುಧವಾರ ಅಪರಾಹ್ನ 2 ಗಂಟೆಗೆ ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ಹೈಸ್ಕೂಲಿನ ಸಭಾಂಗಣದಲ್ಲಿ ಜರಗಲಿರುವುದು . ಎಲ್ಲರಿಗೂ ಆದರದ ಸ್ವಾಗತ
MATHS SCIENCE QUIZ
ಶಾಲಾ ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆಯು ದಿನಾಂಕ 05-10-2016 ನೇ ಬುಧವಾರ ಅಪರಾಹ್ನ 2 ಗಂಟೆಗೆ ಹಾಗು ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯು ದಿನಾಂಕ 06-10-2016 ನೇ ಗುರುವಾರ ಅಪರಾಹ್ನ 2 ಗಂಟೆಗೆ ನಡೆಯಲಿರುವುದು.
BIRTHDAY
ನಮ್ಮ ಶಾಲೆಯ ಮೂರನೇ ತರಗತಿಯ ಪ್ರಣವ್ ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು
ನಮ್ಮ ಶಾಲೆಯ ನಾಲ್ಕನೇ ತರಗತಿಯ ವಿವೇಕರಾಮ ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು
ನಮ್ಮ ಶಾಲೆಯ ನಾಲ್ಕನೇ ತರಗತಿಯ ವಿವೇಕರಾಮ ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು
Subscribe to:
Posts (Atom)