FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, September 4, 2017

ONAM CELEBRATION

ಓಣಂ ಹಬ್ಬ  ಆಚರಣೆ 
ನಮ್ಮ ರಾಜ್ಯದ ದೇಶಿಯ ಹಬ್ಬ ಓಣಂ ನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು . ಹೂವಿನ ರಂಗೋಲಿ ಪೂಕಳಂ ಹಾಕಿ ಮಾವೆಲಿಯನ್ನು ಸ್ವಾಗತಿಸಲಾಯಿತು . ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಿದೆವು . ಮಧ್ಯಾಹ್ನ ಅನ್ನ , ಸಾಂಬಾರು, ಕಚಾಂಬಾರ್ ,ಮಜ್ಜಿಗೆ, ಉಪ್ಪಿನಕಾಯಿ , ಪಾಯಸ , ಹೋಳಿಗೆ ಯನ್ನೊಳಗೊಂಡ ಓಣಂ ಸದ್ಯವನ್ನು ಮಕ್ಕಳಿಗೆ ಉಣಬಡಿಸಲಾಯಿತು .ಈ ಸಂದರ್ಭದಲ್ಲಿ ಸರಕಾರದಿಂದ ಉಚಿತವಾಗಿ ಒದಗಿಸಿದ ೫ ಕಿಲೋ ಅಕ್ಕಿಯನ್ನು ಮಕ್ಕಳಿಗೆ ವಿತರಿಸಲಾಯಿತು 




Wednesday, August 23, 2017

INDEPENDANCE DAY CELEBRATION

ಸ್ವಾತಂತ್ರ್ಯ ದಿನಾಚಣೆ 
ನಮ್ಮ ದೇಶದ ೭೧ ನೇ ಸ್ವಾತಂತ್ರ್ಯ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು . ಬೆಳಿಗ್ಗೆ ಮಕ್ಕಳು ಅಧ್ಯಾಪಕರು ಹಾಗೂ ರಕ್ಷಕರು ಸೇರಿಕೊಂಡು ಪ್ರಭಾತ ಫೇರಿ ನಡೆಸಿದೆವು . ಬಳಿಕ ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರಧ್ವಜವನ್ನು ಹಾರಿಸಿದರು . ಮಕ್ಕಳು ಧ್ವಜ ವಂದನೆ ಮಾಡಿ ಧ್ವಜಗೀತೆ ಹಾಡಿದರು . ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ ಉದ್ಘಾಟಿಸಿದರು . ಶಾಲಾ ಪಿ. ಟಿ . ಎ. ಅಧ್ಯಕ್ಷ ಜೋನ್ ಡಿ ಸೋಜ ಅಧ್ಯಕ್ಷತೆ ವಹಿಸಿದರು . ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಭಾರತಿ ಕೆ ಅವರು ಶುಭಾಶಯ ಕೋರಿದರು . ಶಾಲಾ ಅಧ್ಯಾಪಕ ರಾಮ ಮೋಹನ್ ಮಾಸ್ಟರ್ ಸ್ವಾತಂತ್ರ್ಯ ಹೋರಾಟದ ಕುರಿತು ವಿಸ್ತಾರವಾಗಿ ತಿಳಿಸಿದರು .ಶಾಲಾ ಮುಖ್ಯೋಪಾಶ್ಯಾಯರು ಸ್ವಾಗತಿಸಿದರು . ರೇವತಿ ಟೀಚರ್ ವಂದಿಸಿದರು . ಬಳಿಕ ಮಕ್ಕಳಿಂದ ಭಾಷಣ ದೇಶ ಭಕ್ತಿ ಗೀತೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಕಿಟ್ ಮೊದಲಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು . ಮೊಗೇರ ಸಂಘ ಕಕ್ವೆ ಇವರು ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು . ಎಲ್ಲ ಮಕ್ಕಳಿಗೂ ಪಾಯಸವನ್ನು ವಿತರಿಸಲಾಯಿತು . ಜನ ಗಣ ಮನ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 







ANTI WAR RALLY

ಯುದ್ಧ ವಿರುದ್ಧ ರಾಲಿ 
ಕ್ವಿಟ್  ಇಂಡಿಯಾ ದಿನ, ಹಿರೋಷಿಮಾ ಮತ್ತು ನಾಗಸಾಕಿ ದಿನದ ಭಾಗವಾಗಿ ನಮ್ಮ ಶಾಲೆಯಲ್ಲಿ ಚಿತ್ರ ಪ್ರದರ್ಶನ ಮತ್ತು ಯುದ್ಧ ವಿರುದ್ಧ ರಾಲಿಯನ್ನು ನಡೆಸಲಾಯಿತು. ಯುದ್ಧದಿಂದ ಆಗುವ ಅನಾಹುತಗಳನ್ನು ತೋರಿಸುವ ವಿವಿಧ ಚಿತ್ರಗಳನ್ನು ಪ್ರದರ್ಶಿಸಲಾಯಿತು . ಯುದ್ಧ ವಿರುದ್ಧ ಘೋಷಣೆಗಳನ್ನು ಪ್ರತಿಯೊಂದು ತರಗತಿಯಲ್ಲಿ ತಯಾರಿಸಲಾಯಿತು . ಬಳಿಕ  ವಿಜ್ಞಾನ ಸಂಘದ ನೇತೃತ್ವದಲ್ಲಿ ಯುದ್ಧ ವಿರುದ್ಧ ರಾಲಿಯನ್ನು ನಡೆಸಲಾಯಿತು.  ಪರಿಸರದಲ್ಲಿ ಮೆರವಣಿಗೆಯನ್ನು ನಡೆಸಿ ಯುದ್ಧ ವಿರುದ್ಧ ಘೋಷಣೆಗಳನ್ನು ಕೂಗಿ ಜನ ಜಾಗ್ರತಿ ಮೂಡಿಸಲಾಯಿತು . 


FREEDOM QUIZ

ಸ್ವಾತಂತ್ರ್ಯ ಕ್ವಿಜ್ 
ಮಂಜೇಶ್ವರ ಉಪಜಿಲ್ಲೆಯ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಉಪ್ಪಳ  ಹೈಸ್ಕೂಲಿನಲ್ಲಿ ದಿನಾಂಕ 10.08.2017 ರಂದು ನಡೆದ ಸ್ವಾತಂತ್ರ್ಯ ಕ್ವಿಜ್ ನಲ್ಲಿ ನಮ್ಮ ಶಾಲೆಯ ತನುಷ್ ಕುಮಾರ್ ಮತ್ತು ಮನೋಜ್ಞ ಇವರ ತಂಡವು LP  ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದರು . 

SANSKRIT CAMP

ಬಾಲ ರಂಜಿನಿ - ಸಂಸ್ಕ್ರತ ಶಿಬಿರ 
ಮಂಜೇಶ್ವರ ಉಪಜಿಲ್ಲಾ ಸಂಸ್ಕ್ರತ ಅಕಾಡೆಮಿಕ್ ಕೌನ್ಸಿಲ್  ನೇತೃತ್ವದಲ್ಲಿ ಎಲ್ .ಪಿ. ವಿಭಾಗದ ಸಂಸ್ಕ್ರತ ಮಕ್ಕಳಿಗಾಗಿ ಉಪಜಿಲ್ಲಾ ಮಟ್ಟದ  ಒಂದು ದಿನದ ಬಾಲ ರಂಜಿನಿ ಸಂಸ್ಕ್ರತ ಶಿಬಿರವು ದಿನಾಂಕ 4.8.2017 ನೇ ಶುಕ್ರವಾರ ನಮ್ಮ  ನಡೆಯಿತು . ಕಾರ್ಯಕ್ರಮದ ಆರಂಭದಲ್ಲಿ ನಮ್ಮ ಶಾಲೆಯ ಮಕ್ಕಳು ಸ್ವಾಗತ ಗೀತೆ ಮತ್ತು ಸ್ವಾಗತ ನ್ರತ್ಯ ಮಾಡಿದರು . ಉಪಜಿಲ್ಲೆಯ  ಸುಮಾರು ಇನ್ನೂರು ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದರು . ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಅರುಣಾ ಜೆ ಇವರು  ಶಿಬಿರವನ್ನು ಉದ್ಘಾಟಿಸಿದರು . ಪುತ್ತಿಗೆ ಪಂಚಾಯತು ಕ್ಷೇಮ ಸ್ಥಾಯಿ ಸಮಿತಿ ಚೆಯರ್ಮೆನ್ ಚನಿಯ ಪಾಡಿ ಅಧ್ಯಕ್ಷತೆ ವಹಿಸಿದರು. ವಹಿಸಿದರು . ಕಲ್ಲಕಟ್ಟ ಶಾಲೆಯ ನಿವೃತ್ತ ಸಂಸ್ಕ್ರತ ಅಧ್ಯಾಪಕ ಶ್ರೀ ಗಣಪತಿ ಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದರು . ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ದಿನೇಶ್ ವಿ, ಶಾಲಾ ಮೆನೇಜರ್ ವಿಜಯಶ್ರೀ ಬಿ , ಧರ್ಮತ್ತಡ್ಕ ಹೈಸ್ಕೂಲಿನ ಮೆನೇಜರ್ ಶಂಕರ ನಾರಾಯಣ ಭಟ್ , ಶಾಲಾ ಪಿ.  ಟಿ. ಎ . ಅಧ್ಯಕ್ಷ ಜಾನ್ ಡಿ ಸೋಜ , ಮಾತೃ ಮಂಡಳಿ ಅಧ್ಯಕ್ಷೆ ಭಾರತಿ ಕೆ. ಶಿಬಿರಕ್ಕೆ ಶುಭ ಹಾರೈಸಿದರು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯನ್ . ಮಹಾಲಿಂಗ ಭಟ್ ಸ್ವಾಗತಿಸಿದರು . ಉಪಜಿಲ್ಲಾ ಸಂಸ್ಕ್ರತ ಕೌನ್ಸಿಲ್  ಕಾರ್ಯದರ್ಶಿ ಶ್ರೀಮತಿ ಸೌಮ್ಯ ಟೀಚರ್ ವಂದಿಸಿದರು. ಸಂಸ್ಕ್ರತ ಅಧ್ಯಾಪಕ  ಮಧುಸೂಧನ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು . ಬಳಿಕ ಮಕ್ಕಳನ್ನು ಹತ್ತು ಗುಂಪುಗಳಾಗಿ ಮಾಡಿ ಶಿಬಿರದ ತರಗತಿಗಳನ್ನು ನಡೆಸಲಾಯಿತು . ಸಂಜೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು .






Saturday, July 22, 2017

CHAANDRA DIVAS

ಚಾಂದ್ರ ದಿನಾಚರಣೆ 

ಜುಲಾಯಿ 21 ಚಾಂದ್ರ ದಿನವನ್ನು ಬಹಳ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಬಾಹ್ಯಾಕಾಶ ಯಾತ್ರೆಯ ಚರಿತ್ರೆ , ಬಾಹ್ಯಾಕಾಶ ಸಂಚಾರಿಗಳು ಹಾಗು ಚಾಂದ್ರ ಯಾನಕ್ಕೆ ಸಂಬಂಧಿಸಿದ  ವಿವಿಧ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ಪ್ರತಿಯೊಂದು ತರಗತಿಯ ಮಕ್ಕಳು ಸಮಾಜ ವಿಜ್ಞಾನ ಪಾಠದ ಸಮಯದಲ್ಲಿ ಸಸಮಾಜ ಅಧ್ಯಾಪಕರ ಸಹಾಯದೊಂದಿಗೆ ಪ್ರತಿಯೊಂದು ಚಿತ್ರದ ವಿವರಣೆಯನ್ನು ಪಡೆದುಕೊಂಡರು . ಶಾಲಾ ಪಿ.ಟಿ. ಎ  ಸದಸ್ಯರು ಅಧ್ಯಕ್ಷರು ಉಪಸ್ಥಿತರಿದ್ದರು

Sunday, July 16, 2017

Birthday

ಹುಟ್ಟುಹಬ್ಬ 
ನಮ್ಮ ಶಾಲೆಯ ಐದನೇ ತರಗತಿಯ ವರ್ಷ ಕೆ ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನೂ ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Paper Report


Sunday, July 9, 2017

PTA GENERAL BODY MEETING

ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ 
  2017-18 ಶೈಕ್ಷಣಿಕ ವರ್ಷದ PTA ಮಹಾ ಸಭೆಯು ದಿನಾಂಕ 08.07.2017 ನೇ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಪಿ.ಟಿ. ಎ. ಅಧ್ಯಕ್ಷ ಜೋನ್ ಡಿ ಸೋಜ ಅಧ್ಯಕ್ಷತೆ ವಹಿಸಿದ ಸಭೆಯನ್ನು ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಲಾ ಅಧ್ಯಾಪಕ ವೆಂಕಟ್ರಮಣ ಯನ್. ಗತ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಮುಖ್ಯೋಪಾಧ್ಯಾಯರು  ಲೆಕ್ಕಪತ್ರ ಮಂಡಿಸಿದರು. ಈ ಸಾಲಿನ PTA ಅಧ್ಯಕ್ಷರಾಗಿ ಜೋನ್ ಡಿ ಸೋಜ ಅವರೂ MPTA ಅಧ್ಯಕ್ಷರಾಗಿ ಶ್ರೀಮತಿ ಭಾರತಿ ಕೊಯಂಗಾನ ಅವರೂ ಪುನರಾಯ್ಕೆಗೊಂಡರು. PTA ಉಪಾಧ್ಯಕ್ಷರಾಗಿ ಮೊಹಮ್ಮದ್ ಮರಕ್ಕಾಡ್, MPTA ಉಪಾಧ್ಯಕ್ಷರಾಗಿ ನಸೀಮಾ ಕನಿಯಾಲತ್ತಡ್ಕ ಆರಿಸಲ್ಪಟ್ಟರು. ಅಲ್ಲದೆ 17 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಈ ವರ್ಷ ಸರಕಾರದಿಂದ ಉಚಿತವಾಗಿ ಒದಗಿಸಿದ ಶಾಲಾ ಸಮವಸ್ತ್ರವನ್ನು ಶಾಲಾ ಮೆನೇಜರ್ ವಿತರಿಸಿದರು .ಶಾಲಾ ಅಧ್ಯಾಪಕ ರಾಮ ಮೋಹನ್ ಸಿ.ಯಚ್ ಶಿಸ್ತು ಮತ್ತು ಶಾಲಾ ನಿಯಮಾವಳಿಗಳ ಬಗ್ಗೆ ರಕ್ಷಕರಿಗೆ ಮಾಹಿತಿ ನೀಡಿದರು . ಶಿಕ್ಷಕಿ ಕಮಲಾಕ್ಷಿ ಟೀಚರ್ ಅವರು ವ್ಯಕ್ತಿ ಶುಚಿತ್ವ ಮತ್ತು ಆರೋಗ್ಯದ ಕುರಿತು ತರಗತಿ ನಡೆಸಿದರು. ಶಾಲಾ ಮುಖ್ಯೋಪಾಧ್ಯಾಯರು ವಿವಿಧ ಸ್ಕಾಲರ್ಶಿಪ್ ಗಳ  ಬಗ್ಗೆ ಹಾಗು ಶಾಲೆಯಲ್ಲಿರುವ ವಿವಿಧ ವ್ಯವಸ್ಥೆಗಳು ಮತ್ತು ಮುಂದಿನ ಯೋಜನೆಯ ಬಗ್ಗೆ ತಿಳಿಸಿದರು. ರಕ್ಷಕರಿಗೆ ಶಾಲೆಯ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಒಂದು ವಾಟ್ಸಾಪ್ ಗ್ರೂಪನ್ನು ರಚಿಸುವುದೆಂದು ತೀರ್ಮಾನಿಸಲಾಯಿತು. ಶಾಲೆಯಳ್ಳಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ತಮ್ಮ ಸಂಪೂರ್ಣ ಸಹಾಯ ಸಹಕಾರಗಳನ್ನು ನೀಡುತ್ತೇವೆಂದು ರಕ್ಷಕರು ಹೇಳಿದರು. ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಯನ್ ರಾಮಚಂದ್ರ ಭಟ್ ಮತ್ತು MPTA ಅಧ್ಯಕ್ಷೆ ಭಾರತಿ ಕೊಯಂಗಾನ ಶುಭವನ್ನು ಕೋರಿದರು. SDPHS Dharmathadka ದ  ಪ್ರಬಂಧಕ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು .ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ಹಿರಿಯ್ ಅಧ್ಯಾಪಿಕೆ ರೇವತಿ ಟೀಚರ್ ವಂದಿಸಿದರು. ಗಾಯತ್ರಿ ಟೀಚರ್ ಪ್ರಾರ್ಥನೆ ಹಾಡಿದರು ಶ್ರೀ ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲರಿಗು ಉಪಹಾರವನ್ನು ನೀಡಲಾಯಿತು


SCHOOL PARLIAMENT ELECTION

ಶಾಲಾ ಪಾರ್ಲಿಮೆಂಟು ಚುನಾವಣೆ 
2017-18 ನೇ ಶೈಕ್ಷಣಿಕ ವರ್ಷದ ಶಾಲಾ ಪಾರ್ಲಿಮೆಂಟು ಚುನಾವಣೆಯು ತಾರೀಕು 07.07.2017 ನೇ ಶುಕ್ರವಾರ ಜರಗಿತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಎಲ್ಲರು ತಮ್ಮ ಮತ ಚಲಾಯಿಸುವ ಮೂಲಕ  ಮತದಾನದ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡರು. ಮೂರು ಮಕ್ಕಳು ನಾಮ ಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು . ಅಭ್ಯರ್ಥಿಗಳಿಗೆ ಕಾರು, ಕೊಡೆ, ಮತ್ತು ಶಾಲಾ ಬ್ಯಾಗ್ ನ್ನು ಚುನಾವಣಾ ಚಿಹ್ನೆಯಾಗಿ ನೀಡಲಾಯಿತು . ಬ್ಯಾಲೆಟ್ ಪೇಪರನ್ನು ತಯಾರಿಸಿ ಮಕ್ಕಳಿಗೆ ಚುನಾವಣೆಯ ದಿನ ವಿತರಿಸಲಾಯಿತು. ಅದರಲ್ಲಿ ತಮಗಿಷ್ಟವಾದ ಅಭ್ಯರ್ಥಿಗೆ ಮತ ಚಲಾಯಿಸಿದರು. ಪ್ರಿಸೈಡಿಂಗ್ ಆಫೀಸರ್, ಪೋಲಿಂಗ್ ಆಫೀಸರ್ ಆಗಿ ಮಕ್ಕಳೇ ಕರ್ತವ್ಯ ನಿರ್ವಹಿಸಿದರು . ಅಂತಿಮವಾಗಿ ಏಳನೇ ತರಗತಿಯ ಫಾತಿಮತ್ ಅಲ್ಫಿಯಾ ಶಾಲಾ ನಾಯಕಿಯಾಗಿಯೂ , ಏಳು ಎ  ತರಗತಿಯ ಗುರುಕಿರಣ್ ಉಪನಾಯಕನಾಗಿಯೂ ಆಯ್ಕೆಯಾದರು. 


English Skit



Wednesday, July 5, 2017

ವಾಚನಾ ಪಕ್ಷಾಚಾರಣೆ 
ಪಿ. ಎನ್ . ಪಣಿಕ್ಕರ್ ಅವರ ನೆನಪಿಗೋಸ್ಕರ ನಮ್ಮ ಶಾಲೆಯಲ್ಲಿ ಜೂನ್ ೧೯ ರಿಂದ ವಾಚನಾ ಪಕ್ಷಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು. ಜೂನ್ ೧೯ ರಂದು ಶಾಲಾ ಅಸೆಮ್ಬಲಿಯಲ್ಲಿ ಪಿ. ಎನ್ .ಪಣಿಕ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಶಾಲಾ ಲೈಬ್ರರಿಯನ್ನು ಸಜ್ಜುಗೊಳಿಸಿ ಎಲ್ಲ ತರಗತಿಗೆ ಅಗತ್ಯವಿರುವ ಪುಸ್ತಕಗಳನ್ನು ತರಗತಿ ಟೀಚರ್ ಗಳಿಗೆ ನೀಡಲಾಯಿತು. ಬಳಿಕ ಎಲ್ಲ ತರಗತಿಯ ಮಕ್ಕಳಿಗೆ ಪುಸ್ತಕವನ್ನು ನೀಡಿ ಆ ಪುಸ್ತಕವನ್ನು ಓದಿ ಟಿಪ್ಪಣಿ ಬರೆದು ತರಲು ತಿಳಿಸಲಾಯಿತು .  ಎಲ್ಲ ತರಗತಿಯ ಓದುವ ಮೂಲೆಗಾಗಿ ಮಕ್ಕಳಿಂದ ಪುಸ್ತಕ ಸಂಗ್ರಹಿಸಿ ತರಲು ಹೇಳಿದೆವು . ಪ್ರತಿ ದಿನ ಒಂದೊಂದು ಪುಸ್ತಕವನ್ನು ಆಯ್ದ ಮಕ್ಕಳಿಗೆ ನೀಡಿ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ನಡೆಸಲಾಯಿತು. ವಾರ್ತಾ ಪತ್ರಿಕೆಗಳ ಹೆಸರನ್ನೊಳಗೊಂಡ ಮರವನ್ನು ಪ್ರದರ್ಶಿಸಲಾಯಿತು . 
ಈ ಮರದಲ್ಲಿ ಅಡಗಿರುವ ಪತ್ರಿಕೆಗಳ ಹೆಸರು ಹುಡುಕುವ ಚಟುವಟಿಕೆಯನ್ನು ನಡೆಸಿ ಅತಿ ಹೆಚ್ಚು ಹೆಸರು ಬರೆದ ಮಗುವಿಗೆ ಬಹುಮಾನ ನೀಡಲಾಯಿತು ಮರುದಿನ ಗಾದೆಮಾತುಗಳಿಗೆ ಸಂಬಂಧಿಸಿದ ಚಟುವಟಿಕೆ ನಡೆಸಲಾಯಿತು . 
ನಮ್ಮ ಶಾಲೆಯಸಮೀಪವಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಗ್ರಂಥಾಲಯದ ಅಧ್ಯಕ್ಷರು ಕೇರಳ ಸಾಹಿತ್ಯಪರಿಷತ್ತಿನ  ಘಟಕದ ಗೌರವ ಕಾರ್ಯದರ್ಶಿಯೂ  ಆಗಿರುವ ರಾಮಚಂದ್ರ ಭಟ್ಟರು ಗ್ರಂಥಾಲಯದ ಕುರಿತು ಮಾಹಿತಿ ನೀಡಿದರು . ಈ ಸಂದರ್ಭದಲ್ಲಿ ಗ್ರಂಥಾಲಯದವರು ಶಾಲಾ ಮಕ್ಕಳಿಗೆ ಒಂದು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಿದರು . ಪದಬಂಧ ತುಂಬಿಸುವ ಚಟುವಟಿಕೆಯನ್ನು ನಡೆಸಿದೆವು. 
ಕನ್ನಡ ಸಾಹಿತ್ಯದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನು ನಡೆಸಲಾಯಿತು. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ರಸಪ್ರಶ್ನೆ ಸ್ಪರ್ಧೆಯನ್ನು ಶ್ರೀನಿವಾಸ ಮಾಸ್ಟರ್ ಐ.ಟಿ. ಬಳಸಿ ನಡೆಸಿಕೊಟ್ಟರು . 
ಶಾಲಾ ಸಂಸ್ಕ್ರತ ಅಧ್ಯಾಪಕ ಕೃಷ್ಣ ಪ್ರಸಾದ್ ಪಾಸ್ಟರ್ ಐ.ಟಿ. ಆಧಾರಿತ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಕ್ಕಳಿಗೆ ಮನದಟ್ಟಾಗುವ ರೀತಿಯಲ್ಲಿ ಇದನ್ನು ಮಂಡಿಸಿದರು. ವಾಚನಾ ಪಕ್ಷಾಚಾರಣೆಯ ಸಮಾರೋಪ ಸಮಾರಂಭವನ್ನು ಮತ್ತು ವಿವಿಧ ಕ್ಲಬ್ ಗಳ  ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರು ನೆರವೇರಿಸಿದರು . 
ಶಾಲಾ ಹಿರಿಯ ಶಿಕ್ಷಕಿ ರೇವತಿ ಟೀಚರ್ ಅಧ್ಯಕ್ಷತೆ ವಹಿಸಿದರು . ರಾಮಮೋಹನ್ ಮಾಸ್ಟರ್ ಸ್ವಾಗತಿಸಿದರು . ವಿವಿಧ  ಕ್ಲಬ್ ಗಳ ಸಂಚಾಲಕರು ಕ್ಲಬ್ ಚಟುವಟಿಕೆಗಳ ಬಗ್ಗೆ  ಸಂಕ್ಷಿಪ್ತ ಮಾಹಿತಿ ನೀಡಿದರು ಪ್ರತಿಯೊಂದು ಕ್ಲಬ್ ನ ಸದಸ್ಯರು ವಿಜ್ಞಾನ ಪ್ರಯೋಗ , ಜಾಣ್ಮೆ ಲೆಕ್ಕ , ರಸಪ್ರಶ್ನೆ , ಸಂಘಗಾನ , ದೇಶಭಕ್ತಿ ಗೀತೆ , ಇಂಗ್ಲಿಷ್ ಪಝಲ್ , ಹೀಗೆ ಒಂದೊಂದು ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಓದುವ ಪಕ್ಷಾಚಾರಣೆಯ ಭಾಗವಾಗಿ ಮಕ್ಕಳು ತಯಾರಿಸಿದ ಹಸ್ತ ಪತ್ರಿಕೆಗಳನ್ನು ಮುಖ್ಯೋಪಾಧ್ಯಾಯರು ಬಿಡುಗಡೆ ಮಾಡಿದರು . ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು . ಶ್ರೀನಿವಾಸ ಮಾಸ್ಟರ್ ಧನ್ಯವಾದ ಸಮರ್ಪಿಸಿದರು

VEGETABLE GARDENING

ಶಾಲಾ ಅಡುಗೆ ಮನೆ ತರಕಾರಿ ತೋಟ 
ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಬೇಕಾದ ತರಕಾರಿಗಳನ್ನು ಬೆಳೆಸಲಿಕ್ಕಾಗಿ ಶಾಲಾ ಅಧುಗೆ ಮನೆ ತರಕಾರಿ ತೋಟವನ್ನು ಸಿದ್ಧಪಡಿಸಲಾಯಿತು. ಬೆಂಡೆ, ಅಲಸಂಡೆ , ತೊಂಡೆ , ಬಸಳೆ , ಹರಿವೆ ಮೊದಲಾದ ತರಕಾರಿ ಗಿಡಗಳನ್ನು ನೆಡಲಾಯಿತು .

POST OFFICE VISIT

ಅಂಚೆ ಕಚೇರಿ ಭೇಟಿ 
ಎರಡನೇ ತರಗತಿಯ ಮಕ್ಕಳು ಸಾರ್ವಜನಿಕ ಸಂಸ್ಥೆಯ ಪರಿಚಯ ಮಾಡುವ ಉದ್ದೇಶದಿಂದ ಶಾಲೆಯ ಸಮೀಪವಿರುವ ಅಂಚೆ ಕಚೇರಿಗೆ ಭೇಟಿ ನೀಡಿದರು . ಅಂಚೆ ಕಚೇರಿಯ ಕಾರ್ಯ ವೈಖರಿಯ ಬಗ್ಗೆ ಬ್ರಾಂಚ್ ಪೋಸ್ಟ್ ಮಾಸ್ಟರ್ ಸೀತಾರಾಮ ಭಟ್ ಹಾಗೂ ಅಂಚೆಯ ಅಣ್ಣ ಕರಿಯ ಮಾಹಿತಿ ನೀಡಿದರು.

BIRTHDAY

ಹುಟ್ಟುಹಬ್ಬ 
ನಮ್ಮ ಶಾಲೆಯ ಆರನೇ ತರಗತಿಯ ರಕ್ಷಿತಾ ಸಿ.ಯಚ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಗ್ರಂಥಾಲಯಕ್ಕೆ ಒಂದು ಇಂಗ್ಲಿಷ್ ಇಂಗ್ಲಿಷ್ ಕನ್ನಡ ನಿಘಂಟು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Wednesday, June 21, 2017

AEO VISIT

Manjeshwar AEO Sri Dinesh Sir, visited our school in connection with International Yoga Day celeberation on June 21 . Conducted  staff meeting and gave valuable suggestions and requested whole hearted co operation for the smooth conducting of academic activities.

INTERNATIONAL YOGA DAY CELEBRATION

ವಿಶ್ವ ಯೋಗ ದಿನಾಚರಣೆ 
ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಂದು ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮವು  ಧರ್ಮತ್ತಡ್ಕ  ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯಲ್ಲಿ ಜರಗಿತು. 
ಕಾಸರಗೋಡು ಜಿಲ್ಲಾ ಶಿಕ್ಷಣ ಸಹಾಯಕ ನಿರ್ದೇಶಕರಾದ ಶ್ರೀ ಈ. ಕೆ. ಸುರೇಶ ಕುಮಾರ್  ವಿಶ್ವ ಯೋಗದಿನವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಶಾಲಾ ಪ್ರಬಂಧಕ ಶ್ರೀ ಯನ್. ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು .
 ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ದಿನೇಶ್ ವಿ , ಧರ್ಮತ್ತಡ್ಕ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್  ಸೀತಾರತ್ನ , ಧರ್ಮತ್ತಡ್ಕ ಯು.ಪಿ.ಶಾಲಾ ಪಿ.ಟಿ. ಎ  ಅಧ್ಯಕ್ಷ ಶ್ರೀ ಜೋನ್ ಡಿ ಸೋಜ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.
ಮೊಗ್ರಾಲ್ ಪುತ್ತೂರು ಸರಕಾರೀ ಹೈಯರ್ ಸೆಕೆಂಡರಿ ಶಾಲೆಯ ಕ್ರೀಡಾ ಅಧ್ಯಾಪಕ ಹಾಗು ಯೋಗಾಚಾರ್ಯ ಶ್ರೀ ಗೋಪಾಲಕೃಷ್ಣ ಭಟ್ ಅವರು ಯೋಗದ ಮಹತ್ವದ ಬಗ್ಗೆ ತಿಳಿಸಿ ಯೋಗ ಪ್ರದರ್ಶನ ಹಾಗು ಮಕ್ಕಳಿಂದ ಯೋಗಾಭ್ಯಾಸವನ್ನು ಮಾಡಿಸಿದರು. SDPHSS DHARMATTADKA ದ  ಪ್ರಾಂಶುಪಾಲ  ಶ್ರೀ ಯನ್  ರಾಮಚಂದ್ರ ಭಟ್  ಸ್ವಾಗತಿಸಿದರು. ಯು.ಪಿ.ಶಾಲಾ ಮುಖ್ಯೋಪಾಧ್ಯಾಯ  ಶ್ರೀ ಯನ್ ಮಹಾಲಿಂಗ ಭಟ್ ವಂದಿಸಿದರು . ಧರ್ಮತ್ತಡ್ಕ ಹೈಸ್ಕೂಲಿನ ಸಹಾಯಕ ಅಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು . 


ಧರ್ಮತ್ತಡ್ಕ ಯು.ಪಿ.ಶಾಲೆಯ 75 ಮಕ್ಕಳು ಹೈಸ್ಕೂಲಿನ 50 ಮಕ್ಕಳು ಹಾಗು ಹೈಯರ್ ಸೆಕೆಂಡರಿಯ 30  ಮಕ್ಕಳು ಯೋಗಾಭ್ಯಾಸದಲ್ಲಿ ಭಾಗವಹಿಸಿದರು.

MEDICAL CHECKUP

ಆರೋಗ್ಯ ತಪಾಸಣೆ 
ನಮ್ಮ ಶಾಲೆಗೆ ಈ ವರ್ಷ ದಾಖಲಾದ ಮಕ್ಕಳ ಆರೋಗ್ಯ ತಪಾಸಣೆಯನ್ನು ಶಾಲೆಯ ಹೆಲ್ತ್ ಚಾರ್ಜ್ ಇರುವ ಸಿಸ್ಟರ್ ರಂಜನಿ ಮತ್ತು ಸಿಸ್ಟರ್ ರೇಖಾ ಇವರು ನಡೆಸಿಕೊಟ್ಟರು.

Wednesday, June 7, 2017

OSS VISIT

ಮಂಜೇಶ್ವರ ಬಿ. ಆರ್ .ಸಿ. ಯಿಂದ OSS ತಂಡವು ಇಂದು ನಮ್ಮ ಶಾಲೆಗೆ ಭೇಟಿ ನೀಡಿದರು. ಬಿ. ಆರ್ .ಸಿ. ತರಬೇತುದಾರರಾದ ಗುರುಪ್ರಸಾದ ರೈ , ಇಸ್ಮಾಯಿಲ್ , ಸಂಜು ಮತ್ತು  ಸಜಿತ ಇವರನ್ನೊಳಗೊಂಡ ತಂಡವು ಎಲ್ಲಾ ತರಗತಿಗಳಿಗೂ  ಸಂದರ್ಶಿಸಿ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ವೀಕ್ಷಿಸಿದರು. ಅನಂತರ ವಿಶೇಷ SRG ಸಭೆ ಕರೆದು ಶಾಲೆಯ ಹಿರಿಮೆ ಹಾಗು ಉತ್ತಮ ಪಡಿಸಬೇಕಾದ ವಲಯಗಳ ಬಗ್ಗೆ ಸೂಕ್ತ ಸಲಹೆಗಳನ್ನಿತ್ತರು

Tuesday, June 6, 2017

ENVIRONMENT DAY 2017-18

ಪರಿಸರ ದಿನಾಚರಣೆ 
ಜೂನ್ ೫ ನೇ ತಾರೀಕಿನಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾ ಅಸೇಂಬ್ಳಿಯಲ್ಲಿ ಪರಿಸರ ದಿನದ ಮಹತ್ವವನ್ನು ತಿಳಿಸಲಾಯಿತು. ಪರಿಸರ ಸಂರಕ್ಷಣೆಯ ಕುರಿತು ಪ್ರತಿಜ್ಞೆ ಕೈಗೊಳ್ಳಲಾಯಿತು. ಬಳಿಕ ಶಾಲೆಯ ಪರಿಸರದಲ್ಲಿ ಒಂದು ಜೈವ ಉದ್ಯಾನವನ್ನು ನಿರ್ಮಿಸಿ ಜೈವ ಬೇಲಿಯನ್ನು ಹಾಕಲಾಯಿತು. ಆಸಕ್ತ ಮಕ್ಕಳಿಗೆ  ಗಿಡಗಳನ್ನು ತರಿಸಿ ವಿತರಿಸಲಾಯಿತು. ಪುತ್ತಿಗೆ ಕೃಷಿ ಭವನದಿಂದ ಒದಗಿಸಿದ ಗೇರು ಗಿಡವನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು.