FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, October 21, 2016

SCHOOL KALOTHSAVAM 2016

ಶಾಲಾ ಕಲೋತ್ಸವ 
ಈ ವರ್ಷದ ನಮ್ಮ ಶಾಲಾ ಮಟ್ಟದ ಕಲೋತ್ಸವವು ಅಕ್ಟೊಬರ್ 18 ಮತ್ತು 19 ರಂದು ಜರಗಿತು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಅವರು ದೀಪ ಬೆಳಗಿಸಿ ಉತ್ಸವವನ್ನು ಉದ್ಘಾಟಿಸಿದರು. ಶಾಲಾ ಪಿ. ಟಿ. ಎ. ಅಧ್ಯಕ್ಷ ಜಾನ್ ಡಿ ಸೋಜ ಅಧ್ಯಕ್ಷತೆ ವಹಿಸಿದರು. ಮಕ್ಕಳಿಗೆ ಶಾಸ್ತ್ರೀಯ ಸಂಗೀತ, ಲಘು ಸಂಗೀತ , ಕಂಠಪಾಠ , ಏಕಪಾತ್ರಾಭಿನಯ , ಭಾಷಣ , ಕಥಾಪ್ರಸಂಗ , ಮಾಪಿಳ್ಳಾಪಾಟ್ಟು , ಒಪ್ಪನ , ಜಾನಪದ ನ್ರತ್ಯ , ಸಮೂಹ ನ್ರತ್ಯ, ದೇಶಭಕ್ತಿಗೀತೆ, ಸಮೂಹಗೀತೆ, ನಾಟಕ  ಮೊದಲಾದ ವಿಷಯಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. 












 

BASIC SCIENCE QUIZ

SSBAUPS AILA ದಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ LP ವಿಭಾಗದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ  ನಮ್ಮ ಶಾಲೆಯ ತನುಷ್ ಕುಮಾರ್ ಯನ್  ಮೂರನೇ ಸ್ಥಾನವನ್ನು ಪಡೆದಿರುತ್ತಾನೆ. ಅವನಿಗೆ ಶಾಲಾ ಪರವಾಗಿ ಅಭಿನಂದನೆಗಳು

Monday, October 17, 2016

SOCIAL SCIENCE QUIZ

 ಪೈವಳಿಕೆ ಸರಕಾರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ  ನಮ್ಮ ಶಾಲೆಯ  ಮೂರನೇ ತರಗತಿ ಮಕ್ಕಳಾದ ತನುಷ್ ಕುಮಾರ್ ಯನ್  ಮತ್ತು ಮನೋಜ್ಞಾ ಸಿ. ಯಚ್. ಅವರ ತಂಡವು ತೃತೀಯ  ಸ್ಥಾನವನ್ನು ಪಡೆದಿರುತ್ತಾರೆ. ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು 

MATHS QUIZ WINNER


ಜಿ. ಬಿ. ಎಲ್. ಪಿ. ಶಾಲೆ ಮಂಗಲ್ಪಾಡಿಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಯು.ಪಿ. ವಿಭಾಗದ ಗಣಿತ ರಸಪ್ರಶ್ನೆ ಹಾಗೂ  ಗಣಿತ ಸೆಮಿನಾರಿನಲ್ಲಿ ನಮ್ಮ ಶಾಲೆಯ ಏಳನೇ ತರಗತಿಯ ಸಿಂಜಿತಾ ನೆಕ್ಕಿಗುಳಿ ದ್ವಿತೀಯ ಬಹುಮಾನವನ್ನು ಗಳಿಸಿರುತ್ತಾಳೆ. ಅವಳಿಗೆ ಶಾಲಾ ಪರವಾಗಿ ಅಭಿನಂದನೆಗಳು. ಮಂಗಲ್ಪಾಡಿ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಶೇಖರ್ ಮಾಸ್ಟರ್ ಅವಳಿಗೆ ಬಹುಮಾನವನ್ನು ನೀಡಿದರು. ಅದನ್ನು ಶಾಲಾ  ಅಸೆ೦ಬಿಲಿ ಯಲ್ಲಿ ನಮ್ಮ ಶಾಲಾ ಮುಖ್ಯೋಪಾಧ್ಯಾಯರು  ವಿತರಿಸಿದರು.

Birthday

ಜನ್ಮ ದಿನಾಚರಣೆ

ನಮ್ಮ ಶಾಲೆಯ ಐದನೇ ತರಗತಿಯ ಆಯಿಷತ್ ಮುನ್ಸಿನ ತನ್ನ ಹುಟ್ಟುಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು  ಅವಳಿಗೆ ಹುಟ್ಟು ಹಬ್ಬದ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Tuesday, October 11, 2016

NAVARATHRI FESTIVAL

ಶಾರದಾ ಪೂಜೆ 
ನವರಾತ್ರಿ ಹಬ್ಬದ ಭಾಗವಾಗಿ ನಮ್ಮ ಶಾಲೆಯಲ್ಲಿ ಪುಸ್ತಕ ಪೂಜೆ ಹಾಗು ವಿದ್ಯಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. ಎಲ್ಲಾ ತರಗತಿಯ ಮಾಕಾಳ ಪುಸ್ತಕಗಳನ್ನು ಶಾರದಾ ದೇವಿಯ ಭಾವಚಿತ್ರದ ಮುಂಭಾಗದಲ್ಲಿಟ್ಟು ಪೂಜಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ  ಶ್ರೀ ಶಿವಪ್ರಸಾದ್ ನೆರಿಯ ಅವರು ಪೂಜೆಯನ್ನು ನೆರವೇರಿಸಿಕೊಟ್ಟರು. ಪೂಜೆಯ ಮೊದಲು ಅಧ್ಯಾಪಕರೂ ಮಕ್ಕಳೂ  ಸೇರಿ ದೇವಿಯ ಭಜನೆ ಹಾಡಿದರು . ಪೂಜೆಯ ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಅಕ್ಷರಾಭ್ಯಾಸ ಮಾಡಿಸಿದರು. ಬಳಿಕ ಎಲ್ಲಾ ಮಕ್ಕಳು ಪುಸ್ತಕ ಓದಿದರು . ಶಾಲಾ ಅಧ್ಯಾಪಕ ಶ್ರೀ ರಾಮಮೋಹನ ಮಾಸ್ಟರ್ ನವರಾತ್ರಿ ಹಬ್ಬದ ಮಹತ್ವದ  ಕುರಿತು ಮಕ್ಕಳಿಗೆ ತಿಳಿಸಿದರು. ಎಲ್ಲ ಮಕ್ಕಳಿಗೂ ಪ್ರಸಾದವನ್ನು ವಿತರಿಸಲಾಯಿತು . 





                                  ಹುಲಿವೇಷ ಕುಣಿತ