FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, October 11, 2016

NAVARATHRI FESTIVAL

ಶಾರದಾ ಪೂಜೆ 
ನವರಾತ್ರಿ ಹಬ್ಬದ ಭಾಗವಾಗಿ ನಮ್ಮ ಶಾಲೆಯಲ್ಲಿ ಪುಸ್ತಕ ಪೂಜೆ ಹಾಗು ವಿದ್ಯಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. ಎಲ್ಲಾ ತರಗತಿಯ ಮಾಕಾಳ ಪುಸ್ತಕಗಳನ್ನು ಶಾರದಾ ದೇವಿಯ ಭಾವಚಿತ್ರದ ಮುಂಭಾಗದಲ್ಲಿಟ್ಟು ಪೂಜಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ  ಶ್ರೀ ಶಿವಪ್ರಸಾದ್ ನೆರಿಯ ಅವರು ಪೂಜೆಯನ್ನು ನೆರವೇರಿಸಿಕೊಟ್ಟರು. ಪೂಜೆಯ ಮೊದಲು ಅಧ್ಯಾಪಕರೂ ಮಕ್ಕಳೂ  ಸೇರಿ ದೇವಿಯ ಭಜನೆ ಹಾಡಿದರು . ಪೂಜೆಯ ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಅಕ್ಷರಾಭ್ಯಾಸ ಮಾಡಿಸಿದರು. ಬಳಿಕ ಎಲ್ಲಾ ಮಕ್ಕಳು ಪುಸ್ತಕ ಓದಿದರು . ಶಾಲಾ ಅಧ್ಯಾಪಕ ಶ್ರೀ ರಾಮಮೋಹನ ಮಾಸ್ಟರ್ ನವರಾತ್ರಿ ಹಬ್ಬದ ಮಹತ್ವದ  ಕುರಿತು ಮಕ್ಕಳಿಗೆ ತಿಳಿಸಿದರು. ಎಲ್ಲ ಮಕ್ಕಳಿಗೂ ಪ್ರಸಾದವನ್ನು ವಿತರಿಸಲಾಯಿತು . 





                                  ಹುಲಿವೇಷ ಕುಣಿತ 

No comments:

Post a Comment