ತ್ರಿಕರಿಪುರದಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು.ಪಿ. ಸಂಸ್ಕ್ರತೋತ್ಸವದಲ್ಲಿ ಸಮಗ್ರ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಮಂಜೇಶ್ವರ ಉಪಜಿಲ್ಲೆಯು ತನ್ನದಾಗಿಸಿಗೊಂಡಿದೆ . ಒಟ್ಟು ೮೮ ಅಂಕಗಳನ್ನು ಗಳಿಸಿದ ಮಂಜೇಶ್ವರ ಉಪಜಿಲ್ಲೆಯು ಚೆರುವತ್ತೂರು ಉಪಜಿಲ್ಲೆಯೊಂದಿಗೆ ಸಮಗ್ರ ಪ್ರಶಸ್ತಿಯನ್ನು ಹಂಚಿಕೊಂಡಿದೆ . ಇದರಲ್ಲಿ ನಮ್ಮ ಶಾಲೆಯ ಮಕ್ಕಳು ಉಪನ್ಯಾಸರಚನೆ , ಅಕ್ಷರಶ್ಲೋಕ , ಗಾನಾಲಾಪನ(ಹುಡುಗಿಯರು), ಪ್ರಭಾಷಣ ಮತ್ತು ಸಂಘಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ಸ್ಪರ್ಧೆಗಳಲ್ಲಿ ಎ ಗ್ರೇಡ್ ಪಡೆದು ೨೫ ಅಂಕಗಳನ್ನು ಪಡೆದು ಜಿಲ್ಲೆಯಲ್ಲಿ ಮೂರನೇ ಸ್ಥಾನವನ್ನು ಸಂಪಾದಿಸಿದ್ದಾರೆ. ಸಾಧನೆ ಮಾಡಿದ ಮಕ್ಕಳಿಗೆ ಅಭಿನಂದನೆಗಳು
No comments:
Post a Comment