FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, January 4, 2017

STUDY TOUR

ಶೈಕ್ಷಣಿಕ ಪ್ರವಾಸ 
ನಮ್ಮ ಶಾಲೆಯಿಂದ ಈ  ವರ್ಷ  ವಯನಾಡು ಜಿಲ್ಲೆಯ ವಿವಿಧ ಸ್ಥಳಗಳಿಗೆ ಪ್ರವಾಸ ಕೈಗೊಂಡೆವು . ದಶಂಬರ ತಿಂಗಳಿನ 30 ಮತ್ತು 31 ರಂದು 38 ಮಕ್ಕಳು , 14 ಅಧ್ಯಾಪಕರು ಹಾಗೂ 5 ರಕ್ಷಕರು ಪ್ರವಾಸ ಹೋದೆವು . 30 ರಂದು ಬೆಳಗ್ಗೆ7.20 ಕ್ಕೆ ಧರ್ಮತ್ತಡ್ಕ ದಿಂದ ಹೊರಟು ನೀಲೇಶ್ವರ ,ಪಯ್ಯನ್ನೂರು , ತಳಿಪರಂಬ , ಇರಿಟ್ಟಿ ದಾರಿಯಾಗಿ ಪ್ರಯಾಣಿಸಿದ ನಾವು ಚಹಾ ತೋಟ ಕಾಪಿ ತೋಟ ಬಾಳೆ ತೋಟ ಗಳನ್ನೂ ವೀಕ್ಷಿಸುತ್ತಾ ಸಂಜೆ 4.30 ಕ್ಕೆ ವಯನಾಡಿನ ಮಾನಂತವಾದಿಗೆ  ತಲುಪಿದೆವು. ಅಲ್ಲಿ ಪಳಸ್ಸಿ ರಾಜನ ಸ್ಮಾರಕ ಹಾಗು ಮ್ಯೂಸಿಯಂ ನೋಡಿದೆವು . ಅಲ್ಲಿಂದ ಸುಲ್ತಾನ್ ಬತ್ತೇರಿಯ  ಕಡೆಗೆ ಪ್ರಯಾಣಿಸಿದೆವು. ರಾತ್ರಿ 8 ಕ್ಕೆ ಅಲ್ಲಿಗೆ ತಲುಪಿದೆವು. ವಯನಾಡು ಡಯೆಟ್ ನಲ್ಲಿ ವಸತಿಯ ವ್ಯವಸ್ಥೆ ಮಾಡಿದೆವು . 31 ರಂದು ಬೆಳಿಗ್ಗೆ ಎಡಕಲ್ಲು ಗುಡ್ಡವನ್ನು ಹತ್ತಿದೆವು. ಅಲ್ಲಿಯ ವಿಚಾರಗಳನ್ನು ಗೈಡ್ ಒಬ್ಬರು ವಿವರವಾಗಿ ತಿಳಿಸಿದರು . ಅಲ್ಲಿಂದ ಮಧ್ಯಾಹ್ನ ಭೋಜನ ಮುಗಿಸಿ ಕಲ್ಪೆಟ್ಟ ದಾರಿಯಾಗಿ ಬಾಣಾಸುರ ಸಾಗರ ಆಣೆಕಟ್ಟು ನೋಡಲು ಹೋದೆವು . ಬಳಿಕ ಪುನಃ ಮಾನಂತವಾಡಿ ದಾರಿಯಾಗಿ ನಮ್ಮ ಊರಿನ ಕಡೆಗೆ ಪ್ರಯಾಣ ಬೆಳೆಸಿ ಜನವರಿ 1 ರಂದು ಮುಂಜಾನೆ 4 ಗಂಟೆಗೆ ಶಾಲೆಗೆ ತಲುಪಿದೆವು . 























No comments:

Post a Comment