FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, August 23, 2017

SANSKRIT CAMP

ಬಾಲ ರಂಜಿನಿ - ಸಂಸ್ಕ್ರತ ಶಿಬಿರ 
ಮಂಜೇಶ್ವರ ಉಪಜಿಲ್ಲಾ ಸಂಸ್ಕ್ರತ ಅಕಾಡೆಮಿಕ್ ಕೌನ್ಸಿಲ್  ನೇತೃತ್ವದಲ್ಲಿ ಎಲ್ .ಪಿ. ವಿಭಾಗದ ಸಂಸ್ಕ್ರತ ಮಕ್ಕಳಿಗಾಗಿ ಉಪಜಿಲ್ಲಾ ಮಟ್ಟದ  ಒಂದು ದಿನದ ಬಾಲ ರಂಜಿನಿ ಸಂಸ್ಕ್ರತ ಶಿಬಿರವು ದಿನಾಂಕ 4.8.2017 ನೇ ಶುಕ್ರವಾರ ನಮ್ಮ  ನಡೆಯಿತು . ಕಾರ್ಯಕ್ರಮದ ಆರಂಭದಲ್ಲಿ ನಮ್ಮ ಶಾಲೆಯ ಮಕ್ಕಳು ಸ್ವಾಗತ ಗೀತೆ ಮತ್ತು ಸ್ವಾಗತ ನ್ರತ್ಯ ಮಾಡಿದರು . ಉಪಜಿಲ್ಲೆಯ  ಸುಮಾರು ಇನ್ನೂರು ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದರು . ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಅರುಣಾ ಜೆ ಇವರು  ಶಿಬಿರವನ್ನು ಉದ್ಘಾಟಿಸಿದರು . ಪುತ್ತಿಗೆ ಪಂಚಾಯತು ಕ್ಷೇಮ ಸ್ಥಾಯಿ ಸಮಿತಿ ಚೆಯರ್ಮೆನ್ ಚನಿಯ ಪಾಡಿ ಅಧ್ಯಕ್ಷತೆ ವಹಿಸಿದರು. ವಹಿಸಿದರು . ಕಲ್ಲಕಟ್ಟ ಶಾಲೆಯ ನಿವೃತ್ತ ಸಂಸ್ಕ್ರತ ಅಧ್ಯಾಪಕ ಶ್ರೀ ಗಣಪತಿ ಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದರು . ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ದಿನೇಶ್ ವಿ, ಶಾಲಾ ಮೆನೇಜರ್ ವಿಜಯಶ್ರೀ ಬಿ , ಧರ್ಮತ್ತಡ್ಕ ಹೈಸ್ಕೂಲಿನ ಮೆನೇಜರ್ ಶಂಕರ ನಾರಾಯಣ ಭಟ್ , ಶಾಲಾ ಪಿ.  ಟಿ. ಎ . ಅಧ್ಯಕ್ಷ ಜಾನ್ ಡಿ ಸೋಜ , ಮಾತೃ ಮಂಡಳಿ ಅಧ್ಯಕ್ಷೆ ಭಾರತಿ ಕೆ. ಶಿಬಿರಕ್ಕೆ ಶುಭ ಹಾರೈಸಿದರು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯನ್ . ಮಹಾಲಿಂಗ ಭಟ್ ಸ್ವಾಗತಿಸಿದರು . ಉಪಜಿಲ್ಲಾ ಸಂಸ್ಕ್ರತ ಕೌನ್ಸಿಲ್  ಕಾರ್ಯದರ್ಶಿ ಶ್ರೀಮತಿ ಸೌಮ್ಯ ಟೀಚರ್ ವಂದಿಸಿದರು. ಸಂಸ್ಕ್ರತ ಅಧ್ಯಾಪಕ  ಮಧುಸೂಧನ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು . ಬಳಿಕ ಮಕ್ಕಳನ್ನು ಹತ್ತು ಗುಂಪುಗಳಾಗಿ ಮಾಡಿ ಶಿಬಿರದ ತರಗತಿಗಳನ್ನು ನಡೆಸಲಾಯಿತು . ಸಂಜೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು .






No comments:

Post a Comment