FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, June 20, 2015

INAUGURATION OF VAACHANAA SAPTHAHA & VARIOUS CLUBS

ವಾಚನಾ ಸಪ್ತಾಹದ ಉದ್ಘಾಟನೆ. 
                                                                ಮಕ್ಕಳಿಂದ ಪ್ರಾರ್ಥನೆ
                                 ಶಾಲಾ ಮುಖ್ಯೋಪಾಧ್ಯಾಯರಿಂದ ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತ
               ಉಪಜಿಲ್ಲಾ ಸಮಾಜ ವಿಜ್ಞಾನ ಸಂಘದ ಕಾರ್ಯದರ್ಶಿ ಯವರಿಂದ ಔಪಚಾರಿಕವಾಗಿ ಉದ್ಘಾಟನೆ
                                    ಅಧ್ಯಾಪಕ ಶ್ರೀನಿವಾಸ ಕೆ ಎಚ್ ಇವರಿಂದ ಕಾರ್ಯಕ್ರಮ ನಿರೂಪಣೆ
ಪಿ. ಎನ್. ಪಣಿಕ್ಕರ್ ಅವರ ಚರಮ ದಿನವಾದ ಜೂನ್ 19 ರಂದು ನಮ್ಮ ಶಾಲೆಯಲ್ಲಿ ವಾಚನಾ ಸಪ್ತಾಹ  ಮತ್ತು ಶಾಲೆಯ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ಜರಗಿತು. ಮಂಜೇಶ್ವರ ಉಪಜಿಲ್ಲಾ ಸಮಾಜ ವಿಜ್ಞಾನ ಸಂಘದ ಸಂಚಾಲಕ ಶ್ರೀ ಸತೀಶ್ ಕುಮಾರ್ ಶೆಟ್ಟಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು. ಯುವ ಬರಹಗಾರ್ತಿ ಹಾಗೂ ಕವಯಿತ್ರಿ ಶ್ರೀಮತಿ ಪ್ರಸನ್ನ ವಿ. ಚೆಕ್ಕೆಮನೆ  ಮುಖ್ಯ ಅತಿಥಿಯಾಗಿ ಆಗಮಿಸಿ ಓದುವಿಕೆಯ ಮಹತ್ವ ದ ಕುರಿತು ಮಾತನಾಡಿದರು. ಶಾಲಾ ಪಿ.ಟಿ.ಎ. ಅಧ್ಯಕ್ಷ ಶ್ರೀ ವೆಂಕಟರಾಜ ನೀರಮೂಲೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎನ್. ಮಹಾಲಿಂಗ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಅಧ್ಯಾಪಕ ಶ್ರೀ ರಾಮಮೋಹನ್ ಸಿ ಎಚ್. ವಂದನಾರ್ಪಣೆ ಗೈದರು. ಕ್ರಷ್ಣ ಪ್ರಸಾದ್ ಮಾಸ್ಟರು. ವಿವಿಧ ಕ್ಲಬ್ ಗಳನ್ನು ಹಾಗೂ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಶ್ರೀನಿವಾಸ ಕೆ.ಎಚ್. ಕಾರ್ಯಕ್ರಮ ನಿರೂಪಿಸಿದರು. ಅನಂತರ ಮಕ್ಕಳಿಗೆ ಶಾಲಾ ಗ್ರಂಥಾಲಯದಿಂದ ಪುಸ್ತಕಗಳನ್ನು ವಿತರಿಸಲಾಯಿತು. ವಾಚನಾ ಸಪ್ತಾಹದ ಭಾಗವಾಗಿ ಮಕ್ಕಳಿಗೆ ಸಾಹಿತ್ಯ ರಸಪ್ರಶ್ನೆ, ಕವಿತಾ ರಚನ ಕಮ್ಮಟ,  ಸಾರ್ವಜನಿಕ ಗ್ರಂಥಾಲಯ ಭೇಟಿ, ಪುಸ್ತಕ ಆಸ್ವಾದನಾ ಟಿಪ್ಪಣಿ ತಯಾರಿ  ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

No comments:

Post a Comment