FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, June 26, 2015

Vaachana Vaaracharanam

ವಾಚನಾ ಸಪ್ತಾಹ 
ವಾಚನಾ ಸಪ್ತಾಹದ ಭಾಗವಾಗಿ ನಮ್ಮ ಶಾಲೆಯಲ್ಲಿ ಸಾಹಿತ್ಯ ರಸಪ್ರಶ್ನೆಯನ್ನು ಏರ್ಪಡಿಸಲಾಯಿತು .  ಸುಮಾರು ಅರುವತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು . ಶಾಲಾ ಮುಖ್ಯೋಪಾಧ್ಯಾಯರು  ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಇದರಲ್ಲಿ ಏಳನೇ ತರಗತಿಯ ಸಾತ್ವಿಕ ಕೃಷ್ಣ ಪ್ರಥಮ ಸ್ಥಾನವನ್ನೂ, ಆರನೆ ತರಗತಿಯ ಭವಾನಿ ದ್ವಿತೀಯ ಸ್ಥಾನವನ್ನೂ , ಸಿಂಜಿತಾ  ಮತ್ತು ಅರ್ಶಿತಾ ರೈ  ತ್ರತೀಯ ಸ್ಥಾನವನ್ನೂ ಪಡೆದರು.

































ವಾಚನಾ ಸಪ್ತಾಹದ ಭಾಗವಾಗಿ ಒಂದು ಕವಿತಾ ರಚನಾ ಕಮ್ಮಟವನ್ನು ಏರ್ಪಡಿಸಲಾಯಿತು. ನಮ್ಮ ಶಾಲೆಯ ನಿವ್ರತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎನ್.ಎಚ್. ಲಕ್ಷ್ಮೀನಾರಾಯಣ ಭಟ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. 
ಸುಮಾರು ನಲುವತ್ತು ಮಕ್ಕಳು ಈ ಕಮ್ಮಟದಲ್ಲಿ ಭಾಗವಹಿಸಿದ್ದರು. ಮಕ್ಕಳ ಸಾಹಿತ್ಯದ ಚರಿತ್ರೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ ಬಳಿಕ ತರಗತಿ ನಡೆಸಿದರು. ಮಕ್ಕಳಿಂದ ವಿವಿಧ ರೀತಿಯ ಕವಿತೆಗಳನ್ನು ಬರೆಯಿಸಿದರು. 
ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ 
ವಾಚನಾ ಸಪ್ತಾಹದ ಅಂಗವಾಗಿ ಶಾಲೆಯ ಸಮೀಪವಿರುವ  ಸಾರ್ವಜನಿಕ ಗ್ರಂಥಾಲಯ ಮತ್ತು ವಾಚನಾಲಯಕ್ಕೆ ಬೇಟಿ ನೀಡಿದೆವು. 

 ಗ್ರಂಥಾಲಯದ ಕಾರ್ಯ ವೈಖರಿಯನ್ನು ಗ್ರಂಥಪಾಲಕಿ ಯವರು ವಿವರವಾಗಿ ಮಕ್ಕಳಿಗೆ ತಿಳಿಸಿದರು. ಮಕ್ಕಳು ಹಲವು ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು 
 

No comments:

Post a Comment