FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, January 29, 2015

AMMA THILIYALU.

ಹಿಂದುಳಿದ ವಿಭಾಗದವರ ವಿದ್ಯಾಭ್ಯಾಸದ ಭಾಗವಾಗಿ ಅಮ್ಮ  ತಿಳಿಯಲು   ಎಂಬ ಕಾರ್ಯಕ್ರಮವು ದಿನಾಂಕ 29.1.2015 ರಂದು ನಮ್ಮ ಶಾಲೆಯಲ್ಲಿ ನಡೆಯಿತು.
 ಈ ಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತು ವಾರ್ಡು ಸದಸ್ಯೆ ಕುಮಾರಿ ವಸಂತಿ ಅವರು ಉದ್ಘಾಟಿಸಿದರು. ಶಾಲಾ ಪಿ.ಟಿ. ಎ. ಅಧ್ಯಕ್ಷ ಶ್ರೀ ವೆಂಕಟರಾಜ ನೀರಮೂಲೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಪ್ರಬಂಧಕ ಶ್ರೀ ಎನ್. ಸುಬ್ಬಣ್ಣ ಭಟ್ ಶುಭಾಶಂಸನೆ ಗೈದರು. ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಅಧ್ಯಾಪಕ ಮಹಾಲಿಂಗ  ಭಟ್ ವಂದಿಸಿದರು. ಶ್ರೀನಿವಾಸ ಕೆ.ಎಚ್. ಕಾರ್ಯಕ್ರಮ ನಿರೂಪಿಸಿದರು. 
 ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತೆಯರಿಗೆ ಎರಡು ಸೆಶನ್ ಗಳಲ್ಲಿ ತರಗತಿ ನಡೆಯಿತು. ಶಾಲಾ ಅಧ್ಯಾಪಕರಾದ ಶ್ರೀ ರಾಮಮೋಹನ್ ಸಿ.ಎಚ್. ಮತ್ತು ಶ್ರೀನಿವಾಸ ಕೆ.ಎಚ್. ತರಗತಿ ನಡೆಸಿಕೊಟ್ಟರು. ಕೆಲವು ವೀಡಿಯೋ ಕ್ಲಿಪ್ಪಿಂಗ್ ಗಳನ್ನು ತೋರಿಸಿ ಚರ್ಚಾ ಸೂಚಕಗಳನ್ನಿಟ್ಟು ಯಶಸ್ವಿಯಾಗಿ ತರಗತಿ ನಡೆಸಿದರು. 
ಐವತ್ತಕ್ಕಿಂತಲೂ ಹೆಚ್ಚು ಮಾತೆಯರು ತರಗತಿಗೆ ಹಾಜರಾದರು. ಎಲ್ಲಾ ಮಾತೆಯರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತರಗತಿಯ ಯಶಸ್ಸಿಗೆ ಸಹಕರಿಸಿದರು.

No comments:

Post a Comment