FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, September 16, 2014

HM's conference

ಮುಖ್ಯೋಪಾಧ್ಯಾಯರ ಸಭೆಯ ಮುಖ್ಯಾಂಶಗಳು :
ಇಂದು ಅಪರಾಹ್ನ ಎರಡು ಘಂಟೆಗೆ ಮಂಜೇಶ್ವರ ಬಿ. ಆರ್. ಸಿ ಯಲ್ಲಿ ಜರಗಿದ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಹಾಗೂ ಮಂಜೇಶ್ವರ ಬಿ.ಪಿ.ಒ ನೀಡಿದ ಮಾಹಿತಿಗಳು.
  • ಸೆಪ್ಟಂಬರ್ 20 ರಂದು ನಡೆಯುವ ಕ್ಲಸ್ಟರ್ ತರಬೇತಿಯಲ್ಲಿ ಹಿಂದಿ,ಸಂಸ್ಕ್ರತ,ಉರ್ದು,ಅರೇಬಿಕ್ ಮತ್ತು ಯು.ಪಿ.ಕನ್ನಡ ಭಾಷಾ ಅಧ್ಯಾಪಕರನ್ನು ಬಿಟ್ಟು ಉಳಿದ ಎಲ್ಲಾ ಅಧ್ಯಾಪಕರು ತಪ್ಪದೆ ಹಾಜರಾಗಬೇಕು. 
  • ಕ್ಲಸ್ಟರ್ ತರಬೇತಿ ಕೇಂದ್ರಗಳು :1 ರಿಂದ 4 ತರಗತಿ ಕನ್ನಡ - GHSS Bangramanjeshwara, ಯು.ಪಿ. ಇಂಗ್ಲೀಶ್, ಸಮಾಜ ವಿಜ್ಞಾನ, ಮೂಲ ವಿಜ್ಞಾನ, ಗಣಿತ (ಕನ್ನಡ ಮಾಧ್ಯಮ)- GHSS Uppala, LP Malayalam Medium - BRC Manjeshwara, UP Malayalam (Core subject) - GUPS Kasaragod
  • ಸೆಪ್ಟಂಬರ್ 19 ರಿಂದ 22ರ ವರೆಗೆ ಹೆದ್ದಾರಿ ಎ.ಯು.ಪಿ. ಶಾಲೆ ಬಾಯಾರು ಮುಳಿಗದ್ದೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರ ಶಿಬಿರ. ಪ್ರತಿಯೊಂದು ಶಾಲೆಯಿಂದ ತಲಾ ನಾಲ್ಕು ಸ್ಕೌಟ್ಸ್ ಮತ್ತು ಗೈಡ್ಸ್ ಭಾಗವಹಿಸಬೇಕು. 
  • ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸ್ಪರ್ಧೆಗಳು ಸೆಪ್ಟಂಬರ್ ಕೊನೆಯ ವಾರದಲ್ಲಿ GHSS Mangalpady ಯಲ್ಲಿ ನಡೆಯಲಿರುವುದು. ಅದರ ಪೂರ್ವಭಾವಿಯಾಗಿ organising committee ಸಭೆಯು ಸೆಪ್ಟಂಬರ್ 18 ರಂದು ಅಪರಾಹ್ನ ಎರಡು ಘಂಟೆಗೆ GHSS Mangalpady ಯಲ್ಲಿ ನಡೆಯಲಿರುವುದು. 
  • ಸೆಪ್ಟಂಬರ್ 23 ರಂದು ಬಿ. ಅರ್.ಸಿ. ಮಂಜೇಶ್ವರದಲ್ಲಿ ಒಂದು ದಿನದ Work experience workshop ನಡೆಯಲಿರುವುದು. ಪ್ರತೀ ಶಾಲೆಯಿಂದ ಆಸಕ್ತಿಯಿರುವ ಒಬ್ಬರು ಅಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಬೇಕು. (ಕತ್ತರಿ, ಸೂಜಿ ನೂಲು, ಪೇಪರ್ ನೈಫ್ ,ಸ್ಕೇಲ್, ವೇಸ್ಟ್ ಸೋಕ್ಸ್, ವೇಸ್ಟ್ ಬಟ್ಟೆ,ಇತ್ಯಾದಿ ಕೊಂಡುಹೋಗಬೇಕು)
  • First Term Evaluation - ಬದಲಾದ ವೇಳಾಪಟ್ಟಿ
  • ಸೆಪ್ಟಂಬರ್ ಕೊನೆಯ ವಾರದಲ್ಲಿ ಕ್ಲಾಸ್ ಪಿ.ಟಿ.ಎ. ನಡೆಸಬೇಕು. 
  • ವಿಜ್ಞಾನ ಸಂಘದ ಆಶ್ರಯದಲ್ಲಿ ಶಾಲಾ ಮಟ್ಟದಲ್ಲಿ ಸೆಪ್ಟಂಬರ್ 25ರಂದು ವಿಜ್ಞಾನ ರಸಪ್ರಶ್ನೆ ನಡೆಸಬೇಕು 
  • ಶಾಲಾ ಮಟ್ಟದಲ್ಲಿ ದಸರಾ ನಾಡ ಹಬ್ಬ ಆಚರಿಸುವುದು 
  • ಸಾಕ್ಷರ ಯೋಜನೆಯ ಭಾಗವಾಗಿ ಒಂದು ಶನಿವಾರ ಶಾಲಾ ಮಟ್ಟದ ಶಿಬಿರವನ್ನು ನಡೆಸುವುದು

No comments:

Post a Comment