FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, September 15, 2014

September 15 - Engineers Day

ಇಂದು (ಸೆಪ್ಟಂಬರ್ 15 )  ಎಂಜಿನಿಯರ್ಸ್ ಡೇ :
ದೇಶದ ಅಪ್ರತಿಮ ಎಂಜಿನಿಯರ್ ಸರ್.ಎಮ್. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಇಂದು (ಸೆಪ್ಟಂಬರ್ 15) ದೇಶದಾದ್ಯಂತ ಎಂಜಿನಿಯರ್ ಸಮುದಾಯವು ಎಂಜಿನಿಯರ್ಸ್ ಡೇ ಎಂದು ಆಚರಿಸುತ್ತಾರೆ .  ಶಿಕ್ಷಣ ತಜ್ಞರಾಗಿ, ಕೈಗಾರಿಕಾ ಕ್ರಾಂತಿಯ ಹರಿಕಾರರಾಗಿ ಅನೇಕ  ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸ ಮಾಡಿದ ಚತುರ ಎಂಜಿನಿಯರ್,ದಕ್ಷ ಆಡಳಿತಗಾರ ಸಹ್ರದಯಿ , ದಯಾಮಯಿ ಸರ್.ಎಮ್. ವಿಶ್ವೇಶ್ವರಯ್ಯ ಅವರ 154 ನೇ ಹುಟ್ಟುಹಬ್ಬ. ಸರ್. ಎಮ್. ವಿ. ಎಂದೇ ಪ್ರಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ  ಅವರು 1860 ಸೆಪ್ಟಂಬರ್ 15 ರಂದು ಕರ್ನಾಟಕದ ಮುದ್ದೇನಹಳ್ಳಿಯಲ್ಲಿ ಜನಿಸಿದರು. ವ್ರತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಅವರು ಎಂಜಿನಿಯರ್ ಹುದ್ದೆಯನ್ನು ತೊರೆದು ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದರು. ಮೈಸೂರಿನ ಪ್ರಖ್ಯಾತ ಕನ್ನಂಬಾಡಿ ಅಣೆಕಟ್ಟನ್ನು ಕಟ್ಟಿಸಿದರು. ಅಲ್ಲದೆ ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ  ಸ್ವಯಂಚಾಲಿತ  ಫ್ಲಡ್ ಗೇಟ್ ವಿನ್ಯಾಸವೊಂದನ್ನು ಕಂಡುಹಿಡಿದು ಅದಕ್ಕಾಗಿ  ಪೇಟೆಂಟ್ ಪಡೆದರು. 1955 ರಲ್ಲಿ ಭಾರತ ಸರಕಾರದ ಪರಮೋನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯು ಅವರಿಗೆ ಲಭಿಸಿತು. ಅಂತಹ ಮಹಾನ್ ವ್ಯಕ್ತಿಗೆ ನಮ್ಮೆಲ್ಲ್ಲರ ಆದರ ಪೂರ್ಣ ನಮನಗಳು. ಮತ್ತು ದೇಶದ ಎಲ್ಲಾ ಎಂಜಿನಿಯರುಗಳಿಗೆ ಶುಭಾಶಯಗಳು. 

No comments:

Post a Comment