FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, November 15, 2014

CHILD FRIENDLYSCHOOL-PARENTS SANGAMA 2014


                                                   ರಕ್ಷಕರ ಸಮ್ಮೇಳನ
ಸರ್ವಶಿಕ್ಷಾ ಅಭಿಯಾನದ ನೇತೃತ್ವದಲ್ಲಿ ಮಕ್ಕಳ ದಿನಾಚರಣೆಯನ್ನು ಈ ವರ್ಷದ ನವೆಂಬರ್ 14 ರಂದು ರಕ್ಷಕರ ಸಮ್ಮೇಳನವಾಗಿ ಆಚರಿಸಲು ಕೇರಳ ಸರಕಾರ ತೀರ್ಮಾನಿಸಿದ ಪ್ರಕಾರ ನಮ್ಮ ಧರ್ಮತ್ತಡ್ಕ ಎ.ಯು.ಪಿ. ಶಾಲೆಯಲ್ಲೂ ಆಚರಿಸಲಾಯಿತು.


ತಾ . 14.11.2014 ನೇ ಶುಕ್ರವಾರ ಪೂರ್ವಾಹ್ನ 10.00 ಗಂಟೆಗೆ ಸರಿಯಾಗಿ ಶಾಲಾ ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ಆರಂಭವಾಯಿತು .
ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ವೆಂಕಟ್ರಾಜ ನೀರಮೂಲೆಯವರ ಅಧ್ಯಕ್ಷತೆಯಲ್ಲಿ ವಾರ್ಡ್ ಸದಸ್ಯೆ ಕುಮಾರಿ ವಸಂತಿ ಯಂ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಯನ್ ಸುಬ್ಬಣ್ಣ ಭಟ್,ಮಾತೃ ಮಂಡಳಿಯ ಅದ್ಯಕ್ಷೆ ಶ್ರೀಮತಿ ಶ್ರೀದೇವಿ ಪೂಕಳ ಅವರು ಶುಭಾಶಂಸನೆ ಗೈದರು ಆರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯನ್.ಯಚ್.ಲಕ್ಷ್ಮಿನಾರಾಯಣಭಟ್ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು .

ಶಾಲಾ ಅಧ್ಯಾಪಕರಾದ ಯನ್. ಶಂಕರನಾರಾಯಣ ಭಟ್ ಅವರು ಧನ್ಯವಾದ ಸಮರ್ಪಿಸಿದರು . ಅಧ್ಯಾಪಕ ಶ್ರೀ ರಾಮಮೋಹನ್ ಸಿ ಯಚ್ ಅವರು ಕಾರ್ಯಕ್ರಮ ನಿರೂಪಿಸಿದರು . ಬಳಿಕ ನಡೆದ ರಕ್ಷಕರ ಜಾಗೃತಿ ಶಿಬಿರದಲ್ಲಿ ಒಟ್ಟು 133 ಮಂದಿ ರಕ್ಷಕರು ಭಾಗವಹಿಸಿದ್ದರು .
ಮಕ್ಕಳಲ್ಲಿ ಮೂಡಬೇಕಾದ ಮೌಲ್ಯಗಳು,ಮನೋಭಾವಗಳು ,ಅಭ್ಯಾಸಗಳು ,ಕಲಿಕಾ ಬೆಂಬಲ ,ಸೌಹಾರ್ದಯುತ ಮನೆಯ ವಾತಾವರಣ ,ಭಾವನಾತ್ಮಕ ಬೆಂಬಲಗಳು ಇತ್ಯಾದಿ ವಿಚಾರಗಳ ಕುರಿತು ಅಧ್ಯಾಪಕರಾದ ರಾಮಮೋಹನ್ ಸಿ ಯಚ್ , ಶಂಕರನಾರಾಯಣ ಭಟ್,ಪ್ರೇಮಲತಾ ಯo ಅವರು ವಿಷಯ ಮಂಡಿಸಿದರು  
.
ರಕ್ಷಕರಿಂದಲೂ ಸಕಾರಾತ್ಮಕ ಅಭಿಪ್ರಾಯಗಳು ಬಂದುವು . ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಎಚ್ಹೆತ್ತು ಕಾರ್ಯನಿರ್ವಹಿಸುವುದು ಅನಿವಾರ್ಯ ಎಂಬ ಒಕ್ಕೊರಲಿನ ಅಭಿಪ್ರಾಯವು ಸಮ್ಮೇಳನದಿಂದ ಮೂಡಿಬಂತು ಎಲ್ಲ ರಕ್ಷಕರಿಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು

.

No comments:

Post a Comment