FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, November 4, 2014

Kavitha Rachane

ಶಾಲಾ ಮಟ್ಟದ ಕವಿತಾ ರಚನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವಿತೆ :
                 ಹೊಳೆ 
ಬೆಟ್ಟ ಗುಡ್ಡಗಳ ಎಡೆಯಲಿ ಹುಟ್ಟುತ

ಬಳುಕುತ ಕುಲುಕುತ ಹರಿಯುವೆನು 
ಹತ್ತು ಮಂದಿಯ ದಾಹವ ತೀರಿಸಿ
ಮುಂದಕೆ ಮುಂದಕೆ ಹೋಗುವೆನು 
       ಬಟ್ಟೆಯ ಒಗೆಯಲು ನೀರನು ಕುಡಿಯಲು 
       ಬಳಸುವ ನೀರೇ ನನ್ನಿಂದ 
       ನೀರನು ಪಡೆದು ಸಂತಸದಲ್ಲಿ 
       ಹೋಲಿಕೆ ನಡೆಸುವರು ಹೊನ್ನಿಂದ 
ಹಳ್ಳ ಕೊಳಗಳು ಸೇರುವ ಕ್ಷಣದಲಿ 
ಆಗುವೆ ನಾನು ಬಲುದೊಡ್ಡ 
ಆಗಲೆ  ಮಾನವ ಮಾಡುವನು
ಕಲ್ಲನು ಕಟ್ಟಿ ನನಗಡ್ಡ 
                           ಬೆಟ್ಟದ ಮೇಲಿಂದ ಕೆಳಗಿಳಿದಾಗ 
                           ಮೂಡುವುದೊಂದು ಜಲಪಾತ
                           ಅಂದು ನಾನು ಆಗಿದ್ದೆ ಜನರ 
                           ಜೀವನದಲ್ಲಿ ಹಿರಿಪಾತ್ರ 
ಯಾವ ಕಾರಣದ ಪಾಪವು ಎಂದು 
ಮಾಡುತಿರುವರು ನನ್ನ ನಾಶ 
ನೆನಪಿರಲಿ ಇದು ನನ್ನದು ಮಾತ್ರವಲ್ಲ 
ಜನರಿಗೂ ಸಹ ಯಮಪಾಶ 
                               - ಅಪೂರ್ವ ಎಡಕ್ಕಾನ 
                                  VII C  ತರಗತಿ 
ಎರಡನೆ  ಬಹುಮಾನ ಪಡೆದ ಕವಿತೆಯನ್ನು Childrens corner ನಲ್ಲಿ ನೋಡಿರಿ

No comments:

Post a Comment