FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, October 1, 2014

Dasara Naada Habba

ದಸರಾ ನಾಡ ಹಬ್ಬ ಆಚರಣೆ :
ನಮ್ಮ ಶಾಲೆಯಲ್ಲಿ ದಸರಾ ನಾಡ ಹಬ್ಬವನ್ನು  ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು . ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶ್ರೀ ಪಿ. ರಾಮಚಂದ್ರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಪಿ.ಟಿ. ಎ. ಅಧ್ಯಕ್ಷ ಶ್ರೀ ವೆಂಕಟರಾಜ   ನೀರಮೂಲೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಪ್ರಬಂಧಕ ಶ್ರೀ ಎನ್ . ಸುಬ್ಬಣ್ಣ ಭಟ್ ಮುಖ್ಯ ಅತಿಥಿಯಾಗಿ ಆಗಮಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಾಪಕ ನರೇಶ್ ಭಟ್  ಧನ್ಯವಾದ ಸಮರ್ಪಿಸಿದರು. ಶಾಲಾ ಮಕ್ಕಳು ನಾಡ ಗೀತೆ ಹಾಡಿದರು. ಶಂಕರನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು . ಅನಂತರ ಮಕ್ಕಳಿಗೆ ಬಿಸ್ಕೆಟ್ ತಿನ್ನುವುದು , ಲಿಂಬೆ ಚಮಚ ಓಟ , ಕುಪ್ಪಿಯೊಳಗೆ ಬಾಲ ಹಾಕುವುದು , ಆನೆಗೆ ಬಾಲ ಬಿಡಿಸುವುದು , ಸಂಗೀತ ಕುರ್ಚಿ, ಹಗ್ಗ ಜಗ್ಗಾಟ , ಮಡಕೆ ಹೊಡೆತ ಮೊದಲಾದ   ಆಟಗಳನ್ನೂ , ಆಶು ಭಾಷಣ ,ಆಶು ಕವಿತೆ ಮುಂತಾದ ಸಾಹಿತ್ಯ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಯಿತು . 
 ನಮ್ಮ ಶಾಲೆ ಮಕ್ಕಳು TRACK ನೊಂದಿಗೆ ಹಾಡಿದ ನಾಡ ಗೀತೆ

No comments:

Post a Comment