FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, October 31, 2014

Ezhuthachan Puraskar

ಎಳುತ್ತಚ್ಚನ್ ಪ್ರಶಸ್ತಿ :
ಕೇರಳ ಸರಕಾರವು ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಎಳುತ್ತಚ್ಚನ್ ಪ್ರಶಸ್ತಿಯನ್ನು ಈ  ವರ್ಷ ಪ್ರಸಿದ್ದ ಸಾಹಿತಿ  ವಿಷ್ಣು ನಾರಾಯಣನ್ ನಂಬುದಿರಿ  ಅವರಿಗೆ ನೀಡಲು ನಿರ್ಧರಿಸಿದೆ . ಮಲೆಯಾಳ ಭಾಷೆಯ ಪಿತಾಮಹ  ಎಂದು ಕರೆಯಲ್ಪಡುವ ಎಳುತ್ತಚ್ಚನ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇವರಿಗೆ  ವಳ್ಳತ್ತೋಳ್ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪ್ರಶಸ್ತಿ , ಓಡಕ್ಕುಳಲ್ ಪ್ರಶಸ್ತಿ , ವಯಲಾರ್ ಪ್ರಶಸ್ತಿ , ಆಶಾನ್ ಪ್ರಶಸ್ತಿ, ಚಂಗಂಪುಳ  ಪ್ರಶಸ್ತಿ , ಉಳ್ಳೂರ್ ಪ್ರಶಸ್ತಿ ಅಲ್ಲದೆ  ಈ ವರ್ಷ ಕೇಂದ್ರ ಸರಕಾರವು ಪದ್ಮಶ್ರಿ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ . 

No comments:

Post a Comment